Your cart is empty now.
Original ́ Thus Spoke Zarathustara )
“ಇದು ಎಲ್ಲರಿಗಾಗಿ ಮತ್ತು ಯಾರಿಗಾಗಿಯೂ ಅಲ್ಲದ ಪುಸ್ತಕ" ಫ್ರೆಡರಿಕ್ ನೀಷೆಯ ಈ ಮಾತು ಕೃತಿಯಲ್ಲಿನ ಗಹನತೆಯನ್ನು ಹಿಡಿದಿಡುತ್ತದೆ. ಏಕಾಂತದ ಗಿರಿಶಿಖರದಿಂದ ಮನುಜಲೋಕಕ್ಕೆ ಇಳಿದುಬರುವ ಪ್ರವಾದಿ ಜರತೂಸ್ತ್ರ, ಜ್ಞಾನದ ಬೆಳಕನ್ನು ಬೀರುವ ವಿಶಿಷ್ಟ ಪಯಣ, ಇದು ದುರ್ಬಲ ಮನಸ್ಸುಗಳಿಗೆ ಸಾಂತ್ವನ ನೀಡುವ ಗ್ರಂಥವಲ್ಲ, ಬದಲಾಗಿ ಬಲಿಷ್ಠ ಚೇತನಗಳಿಗೆ ಸವಾಲೆಸೆಯುವ ಸಮರ ಕಹಳೆ.
ಓದುಗನು ತನ್ನ ಅಸ್ತಿತ್ವದ ಆಳವನ್ನು ಶೋಧಿಸಿಕೊಳ್ಳಲು ಮತ್ತು ಉತ್ತುಂಗದ ಹಂತಕ್ಕೇರಲು ಇದೊಂದು ದಿವ್ಯ ಕೈಪಿಡಿ. ತನ್ನ ವಿಶಿಷ್ಟ ರೂಪಕಗಳು ಮತ್ತು ಪ್ರಖರ ವೈಚಾರಿಕತೆಯ ಮೂಲಕ, ಫ್ರೆಡರಿಕ್ ನೀಷೆ ಪಾಶ್ಚಾತ್ಯ ಚಿಂತನೆಯನ್ನೇ ಬುಡಮೇಲು ಮಾಡುತ್ತಾನೆ. ಆತ್ಮವಿಮರ್ಶೆ ಮತ್ತು ಬೌದ್ಧಿಕ ಸ್ವಾತಂತ್ರ್ಯವನ್ನು ಬಯಸುವ ಪ್ರತಿಯೊಬ್ಬ ಜ್ಞಾನಪಿಪಾಸುವಿಗೆ ಇದೊಂದು ಅಮೂಲ್ಯ ನಿಧಿ. ಇದು ಕೇವಲ ಒಂದು ಪುಸ್ತಕವಲ್ಲ; ಓದುಗನ ಪ್ರಜ್ಞೆಯನ್ನು ರೂಪಾಂತರಿಸುವ ಒಂದು ಅಗ್ನಿಪರೀಕ್ಷೆ. ನೀಷೆಯ ಲೇಖನಿಯಿಂದ ಹರಿದುಬಂದಿರುವ ಪ್ರತಿಯೊಂದು ವಾಕ್ಯವೂ ಓದುಗನ ಬುದ್ದಿಮತ್ತೆಗೆ ಚುರುಕು ಮುಟ್ಟಿಸುವಂತಿದೆ. ಗತಕಾಲದ ಭಾರವನ್ನು ಇಳಿಸಿ, ವರ್ತಮಾನದಲ್ಲಿ ಪ್ರಜ್ಞಾಪೂರ್ವಕವಾಗಿ ಬದುಕುವ ಕಲೆಯನ್ನು ಜರತೂಸ್ತ್ರ ಕಲಿಸುತ್ತಾನೆ. ಇದು ಕೇವಲ ಓದುವ ಗ್ರಂಥವಲ್ಲ, ಧ್ಯಾನಿಸಬೇಕಾದ ತತ್ವ ಸಂಹಿತೆ; ಆತ್ಮಸಾಕ್ಷಿಯನ್ನು ಬಡಿದೆಬ್ಬಿಸುವ ಘಂಟಾನಾದ. ವಿಶ್ವದ ಶ್ರೇಷ್ಠ ದಾರ್ಶನಿಕ ಕೃತಿಗಳ ಸಾಲಿನಲ್ಲಿ ನಿಲ್ಲುವ ಈ ಪುಸ್ತಕ, ಕನ್ನಡದ ಓದುಗರಿಗೆ ಒಂದು ಬೌದ್ದಿಕ ರಸದೌತಣ. ಮಾನವನ ಅಸ್ತಿತ್ವ ಮತ್ತು ಅರ್ಥಪೂರ್ಣ ಬದುಕಿನ ಹುಡುಕಾಟಕ್ಕೆ ಇದೊಂದು ಶಾಶ್ವತ ದಿಕ್ಕೂಚಿ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.