Your cart is empty now.
ಚಿಂತಕ, ಪ್ರಖರ ವಿಚಾರವಾದಿ ಡಾ. ವಸುದೇವ ಭೂಪಾಲಂ ಅವರು ಬರೆದ ಲೇಖನಗಳ ಕೃತಿ-ದೇವರು ಸತ್ತ. ದೇವರ ಅಸ್ತಿತ್ವವನ್ನು ಬಂಡವಾಳ ಮಾಡಿಕೊಂಡು ಬಡವರನ್ನು-ದಮನಿತರನ್ನು ಮತ್ತಷ್ಟು ಶೋಷಿಸುವ ಮಾರ್ಗವನ್ನಾಗಿಸಿಕೊಂಡ ಪುರೋಹಿತಶಾಹಿಯ ಹುನ್ನಾರವನ್ನು ಬಯಲಿಗೆಳೆಯಲು ಲೇಖಕ ವಸುದೇವ ಭೂಪಾಲಂ ಅವರು ದೇವರ ಚಟ್ಟ ಹೋರರಿ, ದೇವರು ಹುಟ್ಟಿದ್ದು ನಮ್ಮ ಕಲ್ಪನೆಯಲ್ಲಿ ...ಇಂತಹ ಹತ್ತು ಹಲವಾರು ಶೀರ್ಷಿಕೆಗಳ ಮೂಲಕ ಜನಮಾನಸದಲ್ಲಿ ವೈಚಾರಿಕತೆಯನ್ನು ಬೆಳೆಸುವ ಉದ್ದೇಶದೊಂದಿಗೆ ಬರೆದ ಲೇಖನಗಳ ಸಂಗ್ರಹವಿದು. ದೇವರು ಸತ್ತ ಎಂಬುದು ಮೂಲ ದೇವರ ಅಸ್ತಿತ್ವವವನ್ನೇ ನಿರ್ಲಕ್ಷಿಸುವ ವಿಚಾರವಂತೂ ಲೇಖಕರದ್ದಲ್ಲ. ಆದರೆ, ದೇವರ ಅಸ್ತಿತ್ವವನ್ನು ಬಳಸಿಕೊಂಡು ಶೋಷಿಸುವ ವರ್ಗದ ವಿರುದ್ಧ ಅವರು ಬಳಸಿದ ವೈಚಾರಿಕ ಅಸ್ತ್ರವಾಗಿದೆ. ಈ ಕೃತಿಯು, ಪುರೋಹಿತಶಾಹಿಯ ಹಾಗೂ ಮೂಲಭೂತವಾದಿಗಳ ಕೆಂಗೆಣ್ಣಿಗೆ ಗುರಿಯಾಗಿದ್ದು, ಹೊಸದಲ್ಲ. ಆದರೆ ಈ ಕೃತಿಯು ತನ್ನ ವೈಚಾರಿಕ ಗಟ್ಟಿತನದೊಂದಿಗೆ ಅಸಂಖ್ಯ ಯುವಕರನ್ನು ತನ್ನೆಡೆಗೆ ಸೆಳೆಯುತ್ತಿದೆ ಎಂಬುದು ಗಮನಾರ್ಹ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.