Free Shipping Above ₹500 | COD available

Raitarigagi Niranjana Sale -10%
Rs. 135.00Rs. 150.00
Vendor: BEETLE BOOK SHOP
Type: PRINTED BOOKS
Availability: 10 left in stock

ನೀಲೇಶ್ವರದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ದಮನಕ್ಕೆ ಒಳಗಾದ ರೈತ ಸೆಟೆದು ನಿಂತು ಮುಷ್ಟಿ ಬಿಗಿದು ಹೊಸ ಇತಿಹಾಸ ರಚಿಸಿದ್ದನ್ನು ಕಂಡು ಸ್ಫೂರ್ತರಾದವರು ನಿರಂಜನರು. ಆ ಹೋರಾಟದ ಕಿಡಿಯನ್ನು ಎದೆಯಲ್ಲಿ ಕಾಪಿಟ್ಟುಕೊಂಡು ಅದರ ಬೆಳಕಿನಲ್ಲೇ ಅವರು 'ಚಿರಸ್ಮರಣೆ' ಬರೆದರು. ಆ ಕಾದಂಬರಿಯು ನೀಡುವ 'ಸಮ್ಯಕ್ ದರ್ಶನ'ದಲ್ಲಿ ಕೈಬಿಟ್ಟಿರಬಹುದಾದ ಸಣ್ಣಪುಟ್ಟ ಸತ್ಯಗಳನ್ನು ಒಳಗೊಳ್ಳಲು ರೈತ ಹೋರಾಟದ ಇತಿಹಾಸವನ್ನೂ ಹಲವಾರು ಕಥೆಗಳನ್ನೂ ರಚಿಸಿದರು. 'ಮೃತ್ಯುಂಜಯ'ವನ್ನು ಬರೆಯುವ ಹೊತ್ತಿಗೆ ರೈತ ಹೋರಾಟವು ಎಲ್ಲ ನಾಡುಗಳಲ್ಲೂ ಯುಗಯುಗದಲ್ಲೂ ಗೋಚರಿಸಿತ್ತು. ಮರುಕಳಿಸುವ ಮಹಾಪುರಾಣವಾಗಿ

ನಿರಂಜನರ ಸಾಹಿತ್ಯದಲ್ಲಿ ರೈತನ ನೋವು, ನಿಟ್ಟುಸಿರು, ಸಿಟ್ಟು, ಸಂಘಟನೆ ಮತ್ತು ಪ್ರತಿರೋಧ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಮುಖ್ಯ ವಸ್ತುವಾಗಿದೆ. ಈ ವಸ್ತುವಿನ ವಿವಿಧ ವಿನ್ಯಾಸಗಳನ್ನು ಪ್ರತಿನಿಧಿಸುವ ಕಥೆಗಳನ್ನು ಎಚ್.ಆರ್.ನವೀನ್ ಕುಮಾರವರು ಆಯ್ದು ಜೋಡಿಸಿದ್ದಾರೆ. ಅವರೂ ಸಹ ರೈತ ಚಳುವಳಿಯ ಒಡನಾಡಿಯಾಗಿದ್ದವರು; ತಮ್ಮ ಬರಹಗಳಲ್ಲೂ ಭಾವಚಿತ್ರಗಳಲ್ಲೂ ರೈತ ಹೋರಾಟದ ಅಪೂರ್ವ ಕ್ಷಣಗಳನ್ನು ದಾಖಲಿಸಿದವರು. ಅವರ ವಿಸ್ತಾರವಾದ ಪ್ರಸ್ತಾವನೆ ನಿರಂಜನರ ರೈತ-ಕೇಂದ್ರಿತ ಬರಹಗಳ ಆಪ್ತಪರಿಚಯವನ್ನು ಒದಗಿಸುತ್ತದೆ; ಅವುಗಳ ಸಮಕಾಲೀನ ಪ್ರಸ್ತುತತೆ ಏನೆಂದು ಚಿಂತಿಸುತ್ತದೆ.

ಇತ್ತೀಚೆಗೆ ದೆಹಲಿಯ ಗಡಿಭಾಗದಲ್ಲಿ ಹೊಸ ಇತಿಹಾಸ ಬರೆದ ರೈತ ಹೋರಾಟದ ಹಿನ್ನೆಲೆಯಲ್ಲಿ ನಿರಂಜನರ ಬರಹಗಳ ಓದನ್ನು ನೀಡುತ್ತದೆ. ನಿರಂಜನರ ಜನ್ಮ ಶತಮಾನೋತ್ಸವದ ಅವಸರದಲ್ಲಿ ಇದೊಂದು ಸಕಾಲಿಕ ಪ್ರಕಟಣೆ.

ಡಾ. ಎಂ.ಜಿ. ಹೆಗಡೆ

Guaranteed safe checkout

Raitarigagi Niranjana
- +

ನೀಲೇಶ್ವರದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ದಮನಕ್ಕೆ ಒಳಗಾದ ರೈತ ಸೆಟೆದು ನಿಂತು ಮುಷ್ಟಿ ಬಿಗಿದು ಹೊಸ ಇತಿಹಾಸ ರಚಿಸಿದ್ದನ್ನು ಕಂಡು ಸ್ಫೂರ್ತರಾದವರು ನಿರಂಜನರು. ಆ ಹೋರಾಟದ ಕಿಡಿಯನ್ನು ಎದೆಯಲ್ಲಿ ಕಾಪಿಟ್ಟುಕೊಂಡು ಅದರ ಬೆಳಕಿನಲ್ಲೇ ಅವರು 'ಚಿರಸ್ಮರಣೆ' ಬರೆದರು. ಆ ಕಾದಂಬರಿಯು ನೀಡುವ 'ಸಮ್ಯಕ್ ದರ್ಶನ'ದಲ್ಲಿ ಕೈಬಿಟ್ಟಿರಬಹುದಾದ ಸಣ್ಣಪುಟ್ಟ ಸತ್ಯಗಳನ್ನು ಒಳಗೊಳ್ಳಲು ರೈತ ಹೋರಾಟದ ಇತಿಹಾಸವನ್ನೂ ಹಲವಾರು ಕಥೆಗಳನ್ನೂ ರಚಿಸಿದರು. 'ಮೃತ್ಯುಂಜಯ'ವನ್ನು ಬರೆಯುವ ಹೊತ್ತಿಗೆ ರೈತ ಹೋರಾಟವು ಎಲ್ಲ ನಾಡುಗಳಲ್ಲೂ ಯುಗಯುಗದಲ್ಲೂ ಗೋಚರಿಸಿತ್ತು. ಮರುಕಳಿಸುವ ಮಹಾಪುರಾಣವಾಗಿ

ನಿರಂಜನರ ಸಾಹಿತ್ಯದಲ್ಲಿ ರೈತನ ನೋವು, ನಿಟ್ಟುಸಿರು, ಸಿಟ್ಟು, ಸಂಘಟನೆ ಮತ್ತು ಪ್ರತಿರೋಧ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಮುಖ್ಯ ವಸ್ತುವಾಗಿದೆ. ಈ ವಸ್ತುವಿನ ವಿವಿಧ ವಿನ್ಯಾಸಗಳನ್ನು ಪ್ರತಿನಿಧಿಸುವ ಕಥೆಗಳನ್ನು ಎಚ್.ಆರ್.ನವೀನ್ ಕುಮಾರವರು ಆಯ್ದು ಜೋಡಿಸಿದ್ದಾರೆ. ಅವರೂ ಸಹ ರೈತ ಚಳುವಳಿಯ ಒಡನಾಡಿಯಾಗಿದ್ದವರು; ತಮ್ಮ ಬರಹಗಳಲ್ಲೂ ಭಾವಚಿತ್ರಗಳಲ್ಲೂ ರೈತ ಹೋರಾಟದ ಅಪೂರ್ವ ಕ್ಷಣಗಳನ್ನು ದಾಖಲಿಸಿದವರು. ಅವರ ವಿಸ್ತಾರವಾದ ಪ್ರಸ್ತಾವನೆ ನಿರಂಜನರ ರೈತ-ಕೇಂದ್ರಿತ ಬರಹಗಳ ಆಪ್ತಪರಿಚಯವನ್ನು ಒದಗಿಸುತ್ತದೆ; ಅವುಗಳ ಸಮಕಾಲೀನ ಪ್ರಸ್ತುತತೆ ಏನೆಂದು ಚಿಂತಿಸುತ್ತದೆ.

ಇತ್ತೀಚೆಗೆ ದೆಹಲಿಯ ಗಡಿಭಾಗದಲ್ಲಿ ಹೊಸ ಇತಿಹಾಸ ಬರೆದ ರೈತ ಹೋರಾಟದ ಹಿನ್ನೆಲೆಯಲ್ಲಿ ನಿರಂಜನರ ಬರಹಗಳ ಓದನ್ನು ನೀಡುತ್ತದೆ. ನಿರಂಜನರ ಜನ್ಮ ಶತಮಾನೋತ್ಸವದ ಅವಸರದಲ್ಲಿ ಇದೊಂದು ಸಕಾಲಿಕ ಪ್ರಕಟಣೆ.

ಡಾ. ಎಂ.ಜಿ. ಹೆಗಡೆ

• We deliver the books you order at beetlebookshop within 3-4 working days via india speed post .

Return of any defective / damage item should be done within 7 days from the date of the receipt of the shipment to our working office.