Your cart is empty now.
'ವಿಜಯ ಕರ್ನಾಟಕ' ಪತ್ರಿಕೆಯ ಹಿರಿಯ ಪತ್ರಕರ್ತರಾದ ಚೀ ಜ ರಾಜೀವ ಅವರು ಮಹಾತ್ಮನಿಗೆ ಬರೆದ ಪತ್ರಗಳ ಗುಚ್ಛ -ಪ್ರಿಯ ಗಾಂಧಿ. ಸಮಕಾಲೀನ ಸಂಗತಿಗಳಿಗೆ ಹಿಡಿದ ಕನ್ನಡಿ. 'ರಾಜೀವ, ನೀನು ನಿನ್ನಂಥವರು ನಮ್ಮ ಕಾಲದ ತಲ್ಲಣಗಳನ್ನು ಯಾರಿಗಾದರೂ ಪತ್ರ ಬರೆದು ತಿಳಿಸಬೇಕಾಗಿದೆ ಎಂದು ಗೆಳೆಯರೊಬ್ಬರು ಹೇಳಿದಾಗ ರಾಜೀವ ಅವರು ಗಾಂಧಿಯನ್ನು ಆರಿಸಿಕೊಂಡರು. 'ಪ್ರಿಯ ಗಾಂಧಿ ಸ್ವಸ್ಥ ಸಮಾಜದ ಸಾಕ್ಷಿಪ್ರಜ್ಞೆ' ಎನ್ನುತ್ತಾರೆ ಸಂವಹನ ಸಲಹೆಗಾರ ಎನ್ ರವಿಶಂಕರ್ ತಮ್ಮ ಮುನ್ನುಡಿಯಲ್ಲಿ. 'ಇವು ಗಾಂಧಿಗೆ ಬರೆದ ಪತ್ರಗಳಲ್ಲ, ಬದಲಿಗೆ ಗಾಂಧಿಯೇ ಬರೆದ ಪತ್ರಗಳೇನೋ ಎನ್ನುವಂತೆ ತೋರುತ್ತದೆ. ಗಾಂಧಿಯಂತೆಯೇ ಎಲ್ಲೂ ರಾಜೀವ್ ರಾಜಿಯಾಗುವುದಿಲ್ಲ' ಎನ್ನುತ್ತಾರೆ.
ಈ ಕೃತಿ ಜಾತಿ ಗಣತಿಯಿಂದ ಹಿಡಿದು ಪಾದಯಾತ್ರೆಯ ರಾಜಕೀಯದವರೆಗೆ ಹತ್ತು ಹಲವು ಸಂಗತಿಗಳನ್ನು ನಮ್ಮ ಮುಂದೆ ಹರಡುತ್ತದೆ. ಚಿಂತನೆಗೆ ಹೊಸ ವಿಷಯ ನೀಡುತ್ತದೆ. .
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.