Your cart is empty now.
ಮಗನೇ, ಈ ಸಾಮ್ರಾಜ್ಯವನ್ನು ನಿನಗೊಪ್ಪಿಸುತ್ತಿದ್ದೇನೆ. ಇದನ್ನು ನಾನು ನನ್ನ ಪೂರ್ವಜರಿಂದ ಪಡೆದದ್ದಲ್ಲ. ಏಕೆಂದರೆ ಯಾದವೀ ಕಲಹದಿಂದ ಪಡೆದುಕೊಂಡ ಸಾಮ್ರಾಜ್ಯದ ಅಡಿಪಾಯ ಯಾವಾಗಲೂ ಬಿರುಕು ಬಿಟ್ಟಿರುತ್ತದೆ. ಆದರೆ ನಮ್ಮ ಕುಟುಂಬದಲ್ಲಾಗಲೀ, ಸೈನ್ಯದಲ್ಲಾಗಲೀ ನಿನ್ನ ಪಟ್ಟದ ವಿರುದ್ಧ ಪೈಪೋಟಿ ನೀಡುವವರು ಯಾರೂ ಇಲ್ಲ. ಈ ಸಾಮ್ರಾಜ್ಯದ ಆಂತರಿಕ ವ್ಯವಹಾರಗಳ ಬಗ್ಗೆ ನೀನು ಹೆಚ್ಚಿನ ಆತಂಕ ಪಡಬೇಕಿಲ್ಲ. ಆದರೆ ನೀನು ದೂರದೃಷ್ಟಿ ಹೊಂದಿರಬೇಕು. ಔರಂಗಜೇಬನ ಪತನದ ನಂತರ ಏಷಿಯಾದ ಸಾಮ್ರಾಜ್ಯಗಳಲ್ಲಿ ಭಾರತದ ಸ್ಥಾನ ಕೆಳಗೆ ಕುಸಿದಿದೆ. ಈ ನಮ್ಮ ಪ್ರಿಯ ಭೂಮಿ ಹಲವು ಪ್ರಾಂತ್ಯಗಳಾಗಿ ವಿಭಜನೆ ಹೊಂದಿ ಅವು ಪರಸ್ಪರ ಕಚ್ಚಾಡುತ್ತಿವೆ. ಹಲವು ಗುಂಪುಗಳಾಗಿ ಒಡೆದುಹೋಗಿರುವ ಜನ ದೇಶಪ್ರೇಮವನ್ನು ಕಳೆದುಕೊಂಡಿದ್ದಾರೆ. ಹಿಂದೂಗಳು ಶಾಂತಿ ಸಂಧಾನದ ಜಪ ಮಾಡುತ್ತಾ ಬ್ರಿಟೀಷರಿಗೆ ಬಲಿಯಾಗಿ ಈ ದೇಶವನ್ನು ಕಾಪಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಮುಸ್ಲಿಮರು - ಹಿಂದೂಗಳಿಗಿಂತ ಹೆಚ್ಚು ಐಕಮತ್ಯದಿಂದಿದ್ದು ಈ ಹಿಂದೂಸ್ತಾನವನ್ನು ಉಳಿಸುವ ಜವಾಬ್ದಾರಿ ಅವರ ಮೇಲಿದೆ. ಮಗನೇ, ಈ ದೇಶವನ್ನುಳಿಸಲು ಈ ಎಲ್ಲಾ ಶಕ್ತಿಗಳನ್ನು ಒಗ್ಗೂಡಿಸು, ಈ ನಿನ್ನ ಯೋಜನೆಯಲ್ಲಿ ನಿನಗೆ ದೊಡ್ಡ ಆತಂಕ ಉಂಟುಮಾಡುವವರು ಯೂರೋಪಿಯನ್ನರೇ ಆಗಿದ್ದಾರೆ. ಭಾರತದ ಬಗ್ಗೆ ಅವರಿಗಿರುವ ಅಸೂಯೆಯನ್ನು ನೀನು ಸೋಲಿಸಬೇಕು.
(ಹೈದರಾಲಿ ಪತ್ರದಿಂದ)
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.