Your cart is empty now.
ಹಿರಿಯ ಪತ್ರಕರ್ತ, ಪ್ರಜಾವಾಣಿಯ ಕಾರ್ಯ ನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ಟ ಅವರ ಓದಲೇಬೇಕಾದ ಕೃತಿ ಇದು. ತಮ್ಮ ಪತ್ರಿಕಾ ಜೀವನದಲ್ಲಿ ತಾವು ಬರೆಯಲಾಗದ ಪ್ರಸಂಗಗಳನ್ನು ಇಲ್ಲಿ ಅವರು ಬರೆದಿದ್ದಾರೆ. ಪತ್ರಿಕೆಗಳಲ್ಲಿ ಕಾಣಿಸಿದ್ದು ವರದಿಗಳಾದರೆ ಆ ವರದಿಗಳನ್ನು ಮಾಡುವಾಗ ಕಂಡ, ಆದರೆ ಬರೆಯದೆ ಹೋದ ಅನುಭವಗಳನ್ನು ಇಲ್ಲಿ ಬರೆದಿದ್ದಾರೆ. ಕೆಲವು ನಗೆ ಉಕ್ಕಿಸಿದರೆ, ಇನ್ನು ಕೆಲವು ಮನಸ್ಸು ಕಲಕುತ್ತದೆ, ಇನ್ನಷ್ಟು ಯೋಚನೆಗೆ ಹಚ್ಚುತ್ತದೆ.
ಖ್ಯಾತ ಕಲಾವಿದ ಗುಜ್ಜಾರ್ ಅವರ ಚಿತ್ರಗಳು ಕೃತಿಗೆ ಸಾಕಷ್ಟು ಮೆರುಗು ನೀಡಿದೆ.
ಕೃತಿಯ ಬೆನ್ನುಡಿಯಲ್ಲಿ ರವೀಂದ್ರ ಭಟ್ಟರು ಹೀಗೆ ಬರೆದಿದ್ದಾರೆ-
----------------------------------------
ಇಲ್ಲಿನ ಬಹಳಷ್ಟು ಘಟನೆಗಳು ನನಗೆ ಜೀವನದ ಪಾಠವನ್ನು ಕಲಿಸಿವೆ. ನನ್ನ ದೃಷ್ಟಿಕೋನವನ್ನು ಬದಲಾಯಿಸಿವೆ. ಸಾಮಾಜಿಕ ಪದ್ಧತಿ, ಆಚರಣೆಗಳ ಬಗ್ಗೆ ಗಮನ ಸೆಳೆದಿವೆ.
ಇಲ್ಲಿ ಬರೆದಿರುವ ಎಲ್ಲ ಕತೆಗಳೂ ನಾನು ಯಾವುದೋ ವರದಿಯನ್ನು ಬರೆಯಲು ಹೋಗಿದ್ದಾಗ ನನ್ನ ಅನುಭವಕ್ಕೆ ಬಂದವು. ವರದಿಗಳಲ್ಲಿ ಬರೆಯಲು ಸಾಧ್ಯವಾಗದೇ ಇರುವುದನ್ನು ಇಲ್ಲಿ ಬರೆದಿದ್ದೇನೆ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.