Your cart is empty now.
ಭಾರತ ಉಪಖಂಡವನ್ನು ಕತ್ತಲು ಆವರಿಸಿತ್ತು. 17ನೇ ಶತಮಾನವು ಭೌತಿಕ ಮತ್ತು ಆಧ್ಯಾತ್ಮಿಕ ಹತ್ಯಾಕಾಂಡದ ಯುಗವಾಗಿ ಪೂರ್ವ ನಿರ್ದಿಷ್ಟಗೊಂಡಿತ್ತು. ಆಗ ಯೋಧನಾದ ಮತ್ತು ಯೋಚನಾ ಧಾರೆಯಲ್ಲಿ ತನ್ನ ಕಾಲಘಟ್ಟಕ್ಕಿಂತ ಮುಂದಿದ್ದ ಶಿವಾಜಿ ಮೂಡಿ ಬರುತ್ತಾನೆ. ಗೌರವ, ಮನುಷ್ಯನ ಬದುಕಿಗೆ ಘನತೆ, ಆರ್ಥಿಕಸಮಾನತೆ ಮತ್ತು ಸಬಲೀ ಕರಣಗಳ ಸ್ಫೂರ್ತಿದಾಯಕ ಕನಸನ್ನು ನೀಡುತ್ತಾನೆ. ಆದರೆ ವಿಧಿಯು ಅವನನ್ನು ಬೆಂಬಲಿಸುವುದಿಲ್ಲ. ಅವನು ಭಯಂಕರ ವಿಷಮತೆಗಳನ್ನು ಎದುರಿಸುತ್ತಾನೆ - ಕುಸಿದ ಮತ್ತು ಸೋತ ಸಾಮಾನ್ಯ ಜನ ಸಮೂಹ, ಮೊಘಲ ಸಾಮ್ರಾಜ್ಯದ ಅದಮ್ಯ ಬಲ ಮತ್ತು ಪಶ್ಚಿಮ ಶಕ್ತಿಗಳ ನೌಕಾ ದಳಗಳ ಪ್ರಾಬಲ್ಯ. ಹೀಗಾಗಿ ಸಂಘರ್ಷಮಯವಾದ ಸಿದ್ಧಾಂತಗಳ ನಡುವೆ ಯುದ್ಧ, ತೀವ್ರ ವ್ಯತಿರಿಕ್ತ ನಂಬಿಕೆಗಳ ವ್ಯವಸ್ಥೆಗಳು ಮತ್ತು ಭಾರತದ ಕುರಿತಾದ ವಿವಿಧ ಕಲ್ಪನೆಗಳು ಹುಟ್ಟಿಕೊಳ್ಳುತ್ತವೆ. ಇದರಿಂದಾಗಿ ಅತ್ಯಂತ ಪ್ರಾಚೀನ ನಾಗರಿಕತೆಯ ಭವಿಷ್ಯ ಅಪಾಯದಲ್ಲಿ ಸಿಲುಕುತ್ತದೆ. ಶತಶತಮಾನಗಳವರೆಗೆ ಗುಡುಗು, ಸಿಡಿಲುಗಳನ್ನು ಸುರಿಸ ಬಹುದಾದ ಆ ಮಹತ್ವಪೂರ್ಣ ಘಟನೆಗಳ ಪ್ರಾರಂಭವನ್ನು ಗಮನಿಸಿ. ಅದು ಇಂದಿಗೂ ಈ ಉಪಖಂಡದಲ್ಲಿ ಪ್ರತಿಧ್ವನಿಸುತ್ತಿದೆ. "ಶಿವಾಜಿ ಎಂದು ಕರೆಯಲ್ಪಡುವ ನಿಗೂಢ ವ್ಯಕ್ತಿಯ ಸಂಕ್ಷಿಪ್ತ ಮತ್ತು ಸಮಗ್ರ ಚಿತ್ರಣ. ಇತಿಹಾಸ ಪ್ರಿಯರು ಮತ್ತು ವಿದ್ವಾಂಸರು ಓದಲೇಬೇಕಾದ ಕೃತಿ." শুধু ? (Chanakya's Chant, The Krishna Key ಮತ್ತು The Sialkot Saga ಈ ಜನಪ್ರಿಯ ಕೃತಿಗಳ ಲೇಖಕರು) "'ಈ ಪುಸ್ತಕವು ಸಾಮಾನ್ಯ ಓದುಗರಿಗಾಗಿ ವಿಧಿಯ ಜೊತೆ ಶಿವಾಜಿಯ ವೈಭವಯುತ ಮುಖಾ ముఖియనునేరి ఒడిదిడి." ವಿನಿತಾ ದೇಶಮುಖ್, ಮಾಜಿ ಹಿರಿಯ ಸಂಪಾದಕರು, ದಿ ಇಂಡಿಯನ್ ಎಕ್ಸಪ್ರೆಸ್ "ಕಿರಿಯರು ಮತ್ತು ಹಿರಿಯರು, ಸಾಮಾನ್ಯ ಓದುಗರು ಮತ್ತು ಅಧ್ಯಯನಾಸಕ್ತರು ಓದಲೇ ಬೇಕಾದ ಕೃತಿ. ಜೀವನ ಚರಿತ್ರೆ ಬರಹಗಳಲ್ಲಿ ಇದೊಂದು ಮೇರು ಕೃತಿ." ಅಶುತೋಷ್ ಜಾವಡೇಕರ, ಲೇಖಕರು ಮತ್ತು ಪುಸ್ತಕ ವಿಮರ್ಶಕರು
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.