Your cart is empty now.
ಒಕ್ಕೂಟ ವ್ಯವಸ್ಥೆಯು ಕೇಂದ್ರದಲ್ಲಿ ಯೂನಿಯನ್ ಮತ್ತು ಪರಿಧಿಯಲ್ಲಿ ರಾಜ್ಯಗಳಿರುವ ಉಭಯ ವ್ಯವಸ್ಥೆಯನ್ನು ದೃಢೀಕರಿಸುತ್ತದೆ. ಸಂವಿಧಾನದ ಮೂಲಕ ಎರಡಕ್ಕೂ ಸ್ವಾಯತ್ತತೆಯ ವಿಶೇಷ ಹಕ್ಕುಗಳನ್ನು ಕೊಡಲಾಗಿದೆ. ರಾಜ್ಯವು ಕೇಂದ್ರದ ಏಜೆನ್ಸಿಯಲ್ಲ.
- ಬಿ.ಆರ್.ಅಂಬೇಡ್ಕರ್
(ಸಂವಿಧಾನ ರಚನಾ ಸಭೆಯಲ್ಲಿ)
ಕೇಂದ್ರ -ರಾಜ್ಯ ಸಂಬಂಧಗಳಲ್ಲಿ ಸಹಕಾರ ತತ್ವದ ಮೂಲಧಾತುವಿರುತ್ತದೆ... ಹಿಂದಿನಂತೆ ಈಗಲೂ ಮತ್ತು ಭವಿಷ್ಯದಲ್ಲಿಯೂ ಸಹ ಕಾಮ್ರಡ್ ಶಿಪ್ ನ ಗಾಢವಾದ ಸಂಬಂಧಗಳನ್ನು ಮುಂದುವರಿಸಿಕೊಂಡು ಹೋಗಬೇಕಿದೆ.
- ನೆಹರೂ
(ಎಪ್ರಿಲ್ 15, 1959, ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ)
ನಮ್ಮ ಒಕ್ಕೂಟ ವ್ಯವಸ್ಥೆ ಅಲುಗಾಡುತ್ತಿರುವ ಸಂದರ್ಭದಲ್ಲಿ ಒಕ್ಕೂಟ ವ್ಯವಸ್ಥೆ ಕುರಿತ ಚರ್ಚೆ, ಬರಹಗಳ ಕೊರತೆಯಿದೆ. ಇಂತಹ ಕೊರತೆಯನ್ನು ಬಿ.ಶ್ರೀಪಾದ ಭಟ್ ಅವರ 'ಒಕ್ಕೂಟವೋ, ತಿಕ್ಕಾಟವೋ' ಪುಸ್ತಕ ತುಂಬಬಹುದು. ಈ ಪುಸ್ತಕ ಎಲ್ಲ ಕ್ಷೇತ್ರಗಳಲ್ಲೂ - ಶಾಸನಾತ್ಮಕ, ಆಡಳಿತಾತ್ಮಕ ಹಾಗು ಹಣಕಾಸು - ಗಣರಾಜ್ಯ ವ್ಯವಸ್ಥೆ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಚರ್ಚಿಸುತ್ತಿದೆ.
- ಪ್ರೊ. ಚಂದ್ರ ಪೂಜಾರಿ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.