Your cart is empty now.
ಸುಭಾಷ್ ಚಂದ್ರ ಬೋಸರು ನೆನಪಿಸಿಕೊಂಡಂತೆ:
ಹಿಂದೂ ಸಮಾಜವು ಯೂರೋಪಿನ ಸಮಾಜದಂತೆ ಚರ್ಚ್ನ ಅಡಿಯಲ್ಲಿ ಎಂದೂ ಒಗ್ಗೂಡಿರಲಿಲ್ಲ. ಬದಲಿಗೆ ದೇವರ ಅವತಾರಗಳಿಗೆ ಪುರೋಹಿತರಿಗೆ ಹಾಗೂ ಗುರುಗಳ ಪ್ರಭಾವಕ್ಕೆ ತುಂಬಾನೇ ಒಳಗಾಗಿತ್ತು. ಅಧ್ಯಾತ್ಮಿಕ ವ್ಯಕ್ತಿ ಭಾರತದಲ್ಲಿ ಭಾರಿ ಪ್ರಭಾವವನ್ನು * ಹೊಂದಿದವರಾಗಿದ್ದು ಅಂತಹವರು 'ಸಂತ' ಅಥವಾ 'ಮಹಾತ್ಮ' ಅಥವಾ ಸಾಧುಗಳೆಂದು ಕರೆಸಿಕೊಳ್ಳುತ್ತಿದ್ದರು. ಹಲವಾರು ಕಾರಣಗಳ ಹಿನ್ನೆಲೆಯಲ್ಲಿ ಜನಸಮೂಹವು ಗಾಂಧೀಜಿಯನ್ನು ಭಾರತದ ನಿರ್ವಿವಾದದ ರಾಜಕೀಯ ನಾಯಕರಾಗುವ ಮುಂಚೆ ಮಹಾತ್ಮ ಎಂದು ಕರೆಯಲಾರಂಭಿಸಿತು. ೧೯೨೦ರಲ್ಲಿ ನಡೆದ ನಾಗ್ಪುರ ಕಾಂಗ್ರೆಸ್ ಅಧಿವೇಶನದಲ್ಲಿ ಅಂದು ರಾಷ್ಟ್ರೀಯ ನಾಯಕರೆನಿಸಿಕೊಂಡಿದ್ದ ಎಂ.ಎ. ಜಿನ್ನ 'ಮಿಸ್ಟರ್ ಗಾಂಧಿ' ಎಂದು ಸಂಭೋದಿಸಿದೊಡನೆ ಸಹಸ್ರಾರು ಜನರು ಜಿನ್ನಾಗೆ ತಿರುಗಿ ಬಿದ್ದು 'ಹೇ! ಜಿನ್ನ, 'ಮಹಾತ್ಮ ಗಾಂಧಿ' ಎಂದು ಸಂಭೋದಿಸು ಎಂದು ಧನಿಗೂಡಿಸಿದರು. ಗಾಂಧೀಜಿಯವರ ತಪಸ್ವಿ ಜೀವನ, ಸರಳ ಬಾಳ್ವೆ, ಸಸ್ಯಹಾರ ಸೇವನೆ, ಸತ್ಯದ ಅನುಸರಣೆ, ನಿರ್ಭಯತೆ, ಈ ಎಲ್ಲವೂ ಒಳಗೊಂಡು ಸಂತತ್ವದ ಪ್ರಭಾವಳಿಯನ್ನು ಅವರ ಸುತ್ತ ನಿರ್ಮಿಸಿತ್ತು.
ಸೊಂಟದ ಮೇಲಿನ ಅವರ ತುಂಡುದಟ್ಟಿ ಕ್ರಿಸ್ತನನ್ನು ನೆನಪಿಗೆ ತಂದರೆ, ಉಪನ್ಯಾಸ ಕೊಡುವ ಸಮಯದಲ್ಲಿನ ಅವರ ಕುಳಿತುಕೊಳ್ಳುವ ಭಂಗಿ ಬುದ್ಧನನ್ನು ನೆನಪಿಸುತ್ತಿತ್ತು. ಈಗ ಇವೆಲ್ಲವೂ ಒಗ್ಗೂಡಿ ಜನರ ಗಮನವನ್ನು ತನ್ನತ್ತ ಸೆಳೆಯಲು, ದೇಶವಾಸಿಗಳ ವಿಧೇಯತೆಯನ್ನು ತೀವ್ರವಾಗಿ ಕೆರಳಿಸುವ ನಿಟ್ಟಿನಲ್ಲಿ ಇವೇ ಅಪಾರ ಆಸ್ತಿಯಾಯಿತು ಗಾಂಧೀಜಿಗೆ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.