Your cart is empty now.
ಕೆ.ಎನ್. ಗಣೇಶಯ್ಯ ಕನ್ನಡ ಕಾದಂಬರಿಕಾರರಾಗಿಯಷ್ಟೆ ಹೆಸರು ಮಾಡಿದವರಲ್ಲ. ಮೂಲತಃ ಅವರು ವಿಜ್ಞಾನಿ. ಜೀವವಿಕಾಸದ ತತ್ವಗಳನ್ನು ಮನುಷ್ಯ, ಪ್ರಾಣಿ, ಸಸ್ಯಗಳ ವರ್ತನೆಯ ಹಿನ್ನೆಲೆಯಲ್ಲಿ ಶೋಧಿಸುವುದು ಅವರ ಸಂಶೋಧನಾಸಕ್ತಿ. ಹೀಗಾಗಿ ಕನ್ನಡ ವಿಜ್ಞಾನ ಸಾಹಿತ್ಯಕ್ಕೆ, ವರ್ತನಾಶಾಸ್ತ್ರಕ್ಕೆ ಅವರಿಂದ ಅಮೂಲ್ಯ ಕೊಡುಗೆ ಲಭಿಸಿದೆ. ಮನೋಗಮ ಹೆಸರೇ ಸೂಚಿಸುವಂತೆ ಮುಖ್ಯವಾಗಿ ಪ್ರಜ್ಞೆ ಮನಸ್ಸು, ನಡವಳಿಕೆಗಳನ್ನು ಕುರಿತಾದ ಸ್ವಾರಸ್ಯಕರ ವಿಚಾರಗಳನ್ನು ಒಳಗೊಂಡಿದೆ. 'ನಾವೇಕೆ ದ್ವೇಷಿಸುತ್ತೇವೆ', 'ಪ್ರಜ್ಞೆ ನಿನ್ನ ಸೊತ್ತಲ್ಲ ಎಂದ ಇರುವೆಗಳು', 'ನಮ್ಮ ನಿಮ್ಮೊಳಗಿನ ರಾವಣ', 'ನಾನು ಎಂಬ ನಂಬಿಕೆ' ಮುಂತಾದ ಲೇಖನಗಳು ಜೀವ ಜಗತ್ತಿನಲ್ಲಿ ಮನಸ್ಸು ಪ್ರಜ್ಞೆಗಳ ಪಾತ್ರವನ್ನು ಕುತೂಹಲಕಾ-ರಿಯಾಗಿ ನಿರೂಪಿಸುವುದು ಮಾತ್ರವಲ್ಲ ನಮ್ಮ ಅರಿವನ್ನು ವಿಸ್ತರಿಸುವ ಲೇಖನಗಳಾಗಿವೆ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.