Your cart is empty now.
1972 ರಲ್ಲಿ, ನನ್ನ ಕವಿ-ಸ್ನೇಹಿತ ನಾಮದೇವ ಢಸಾಳ ಅವರೊಂದಿಗೆ, ನಾನು ದಲಿತ ಪ್ಯಾಂಥರ್ನ ಸಹ-ಸಂಸ್ಥಾಪಕನಾದೆ. ಇದು ಅಲ್ಪಕಾಲಿಕ ಚಳುವಳಿಯಾಗಿದ್ದರೂ, ಅಮೇರಿಕಾದ ಬ್ಲಾಕ್ ಪ್ರಾಂಥರ್ನಂತೆ, ಎಲ್ಲಾಅಂಬೇಡ್ಕರ್ ನಂತರದ ಚಳುವಳಿಗಳಲ್ಲಿ ದಲಿತ ಪ್ಯಾಂಥರ್ ಅತ್ಯಂತ ಹೆಚ್ಚು ಮೆಚ್ಚುಗೆಯನ್ನು ಪಡೆದಿದೆ.
ದಲಿತರ ಮೇಲೆ ನಡೆಸಲಾಗುತ್ತಿದ್ದ ದೌರ್ಜನ್ಯಗಳನ್ನು ತಡೆಯಲು ಪ್ರಯತ್ನಿಸಿದ್ದು ದಲಿತ ಪ್ಯಾಂಥರ್ಸ್. ದಲಿತ ಜನಸಾಮಾನ್ಯರಲ್ಲಿ ತಮ್ಮನ್ನು ರಕ್ಷಿಸಲು ಒಂದು ಗುಂಪು ಮತ್ತು ಸಂಘಟನೆ ಇದೆ ಎಂಬ ಪ್ರಜ್ಞೆ ಬೆಳೆಯುತ್ತಿತ್ತು. ಇಂದಿಗೂ, ಹಳ್ಳಿಗಳಲ್ಲಿ ದಲಿತರು ದೌರ್ಜನ್ಯಗಳನ್ನು ಎದುರಿಸಿದಾಗ, ಜನರು ದಲಿತ ಪ್ಯಾಂಥರ್ನಂತಹ ಚಳುವಳಿಯ ಪುನರುಜ್ಜಿವನಕ್ಕಾಗಿ ಹಾತೊರೆಯುತ್ತಾರೆ.
ಜನರ ಹೃದಯದಲ್ಲಿರುವ ಈ ಆಶಯವನ್ನು ಜನಸಾಮಾನ್ಯರಲ್ಲಿ ದಲಿತ ಪ್ಯಾಂಥರ್ಗೆ ದೊರೆತ ಅತ್ಯಂತ ದೊಡ್ಡ ಮನ್ನಣೆ ಎಂದು ಕಾಣಬಹುದು.
ದಲಿತ ಪ್ಯಾಂಥರ್ ಚಳವಳಿಯ ಇತಿಹಾಸವನ್ನು ಕೇವಲ ಮೂವರು ವ್ಯಕ್ತಿಗಳು ಮಾತ್ರ ಬರೆಯಬಲ್ಲರು ಎಂದು ನಾನು ಭಾವಿಸುತ್ತೇನೆ. ಅವರಲ್ಲಿ ಪ್ರಮುಖವಾಗಿ ಸ್ವತಃ ನಾನು. ರಾಜಾಢಾಲೆ ಮತ್ತು ನಾಮದೇವ ಢಸಾಳ. ನಾನು ಆರಂಭದಲ್ಲಿ ಸಂಘಟಕನಾಗಿದ್ದೆ ಮತ್ತು ನಂತರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದೆ. ಆದ್ದರಿಂದ ನನ್ನ ಬಳಿ ಎಲ್ಲಾ ಸಂಬಂಧಿತ ಪತ್ರ ವ್ಯವಹಾರ ಮತ್ತು ದಾಖಲೆಗಳಿವೆ. ನನ್ನ ಬರವಣಿಗೆ ಅಧಿಕೃತವಾಗಿದೆ ಮತ್ತು ದಾಖಲೆಗಳಿಂದ ಬೆಂಬಲಿತವಾಗಿದೆ.
- ಜೆ.ವಿ. ಪವಾರ್
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.