Free Shipping Above ₹500 | COD available

Bari katheyalla - Agraharada kathana Sale -10%
Rs. 360.00Rs. 400.00
Vendor: BEETLE BOOK SHOP
Type: PRINTED BOOKS
Availability: 4 left in stock

ಸುಚೇತ ಕೆ. ಎಸ್ ಅವರ ಈ ಬರವಣಿಗೆ ಸಮಾಜಶಾಸ್ತ್ರೀಯ ಭಾಷೆಯಲ್ಲಿ ಹೇಳಬೇಕೆಂದರೆ ಅಗ್ರಹಾರದ ಬ್ರಾಹ್ಮಣರ ಪೇಟೆಯೊಂದರ ದೈನಂದಿನ ಬದುಕಿನ ವಿವಿಧ ಮುಖಗಳ ಒಂದು 'ಮನುಕುಲಾಧ್ಯಯನ', ಅಥವಾ 'ಸಮಗ್ರ ಅಧ್ಯಯನ ಲಿಂಗ ವ್ಯವಸ್ಥೆ, ಜಾತಿ ಮತ್ತು ಊಳಿಗಮಾನ್ಯ ಪದ್ಧತಿಗಳ ಒಳಪದರಗಳಲ್ಲಿ ಹುದುಗಿ ಕೊಂಡಿರುವ ಅನೇಕ ಕರಾಳ ಸತ್ಯಗಳ ಒಂದು ಅನುಭವ ಆಧಾರಿತ ಕಥನ ಇದು.

- ಆರ್. ಇಂದಿರಾ

 

ಸಮುದಾಯದ ಬದುಕಿನ ಚರಿತ್ರೆಯ, ಹಲವು ಜೀವಂತ ವ್ಯಕ್ತಿಗಳ ಬದುಕಿನ ಜೀವನ ಚರಿತ್ರೆಯ ರೂಪದ ಚಿತ್ರಣ ಮತ್ತು ಆತ್ಮಕಥೆಯ ಲಕ್ಷಣಗಳನ್ನು ಒಳಗೊಂಡ ಈ ಕೃತಿ ಕನ್ನಡದ ವಿಶಿಷ್ಟ ಕೃತಿಗಳಲ್ಲೊಂದು. ಕಳೆದ ಶತಮಾನದ ಉತ್ತರಾರ್ಧದಲ್ಲಿ ಕರ್ನಾಟಕದ ಪುಟ್ಟ ಊರಿನಲ್ಲಿದ್ದ ಸಮುದಾಯದ ಆಪ್ತ ಚಿತ್ರಣದೊಡನೆಯೇ ನಮ್ಮ ಸಂಸ್ಕೃತಿಯ ಹಿರಿಮೆಗಳನ್ನು ಕುರಿತ ಕಲ್ಪನೆಗಳನ್ನು ಮರುಪರಿಶೀಲನೆ ಮಾಡಿಕೊಳ್ಳುವಂತೆ ಒತ್ತಾಯಿಸುವ ಕೃತಿಯೂ ಹೌದು, ಸಮಾಜ, ಸಂಸ್ಕೃತಿಗಳನ್ನು ಸೂಕ್ಷ್ಮ ಮನಸಿನ ಮಹಿಳೆ ತನ್ನ ನೆನಪು ಮತ್ತು ಗ್ರಹಿಕೆಗಳ ಮೂಲಕ ಕಟ್ಟಿಕೊಡುವ ನಿದರ್ಶನ ಶ್ರೀಮತಿ ಸುಚೇತ ಅವರ ಬರವಣಿಗೆಯಲ್ಲಿ ಕಾಣುತ್ತದೆ.

- ಓ.ಎಲ್. ನಾಗಭೂಷಣ ಸ್ವಾಮಿ 

 

ಇದು ಕಲ್ಪಿತ ಕತೆಯಲ್ಲ. ಬದುಕಿದ ಬಾಳು. ನಿಜವಾಗಲೂ ಅನುಭವಿಸಿದ 'ಭಂಗ'ದ ಬವಣೆ. ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಚುರುಕಾಗಿ ಓದಿಸಿಕೊಳ್ಳುತ್ತಾ ನಮ್ಮ ಸಂವೇದನೆಗಳಿಗೆ ಚುರುಕ್ ಎನ್ನುವಂತೆ ಬರೆ ಹಾಕುತ್ತಾ ಸಾಗುವ ಈ ಕಥನ ಈ ಬಗೆಯ ಅನುಭವ ನಿರೂಪಣೆಗಳಲ್ಲೇ ಅಪರೂಪದ್ದಾಗಿ ಮೂಡಿ ಬಂದಿದೆ. ಇದು ಬರಿ ಕಥೆಯಲ್ಲೋ ಅಣ್ಣಾ' ಎಂದು ನಮ್ಮನ್ನು ಹನಿಗಣ್ಣಾಗಿಸುತ್ತದೆ.

- ಬಂಜಗೆರೆ ಜಯಪ್ರಕಾಶ

Guaranteed safe checkout

Bari katheyalla - Agraharada kathana
- +

ಸುಚೇತ ಕೆ. ಎಸ್ ಅವರ ಈ ಬರವಣಿಗೆ ಸಮಾಜಶಾಸ್ತ್ರೀಯ ಭಾಷೆಯಲ್ಲಿ ಹೇಳಬೇಕೆಂದರೆ ಅಗ್ರಹಾರದ ಬ್ರಾಹ್ಮಣರ ಪೇಟೆಯೊಂದರ ದೈನಂದಿನ ಬದುಕಿನ ವಿವಿಧ ಮುಖಗಳ ಒಂದು 'ಮನುಕುಲಾಧ್ಯಯನ', ಅಥವಾ 'ಸಮಗ್ರ ಅಧ್ಯಯನ ಲಿಂಗ ವ್ಯವಸ್ಥೆ, ಜಾತಿ ಮತ್ತು ಊಳಿಗಮಾನ್ಯ ಪದ್ಧತಿಗಳ ಒಳಪದರಗಳಲ್ಲಿ ಹುದುಗಿ ಕೊಂಡಿರುವ ಅನೇಕ ಕರಾಳ ಸತ್ಯಗಳ ಒಂದು ಅನುಭವ ಆಧಾರಿತ ಕಥನ ಇದು.

- ಆರ್. ಇಂದಿರಾ

 

ಸಮುದಾಯದ ಬದುಕಿನ ಚರಿತ್ರೆಯ, ಹಲವು ಜೀವಂತ ವ್ಯಕ್ತಿಗಳ ಬದುಕಿನ ಜೀವನ ಚರಿತ್ರೆಯ ರೂಪದ ಚಿತ್ರಣ ಮತ್ತು ಆತ್ಮಕಥೆಯ ಲಕ್ಷಣಗಳನ್ನು ಒಳಗೊಂಡ ಈ ಕೃತಿ ಕನ್ನಡದ ವಿಶಿಷ್ಟ ಕೃತಿಗಳಲ್ಲೊಂದು. ಕಳೆದ ಶತಮಾನದ ಉತ್ತರಾರ್ಧದಲ್ಲಿ ಕರ್ನಾಟಕದ ಪುಟ್ಟ ಊರಿನಲ್ಲಿದ್ದ ಸಮುದಾಯದ ಆಪ್ತ ಚಿತ್ರಣದೊಡನೆಯೇ ನಮ್ಮ ಸಂಸ್ಕೃತಿಯ ಹಿರಿಮೆಗಳನ್ನು ಕುರಿತ ಕಲ್ಪನೆಗಳನ್ನು ಮರುಪರಿಶೀಲನೆ ಮಾಡಿಕೊಳ್ಳುವಂತೆ ಒತ್ತಾಯಿಸುವ ಕೃತಿಯೂ ಹೌದು, ಸಮಾಜ, ಸಂಸ್ಕೃತಿಗಳನ್ನು ಸೂಕ್ಷ್ಮ ಮನಸಿನ ಮಹಿಳೆ ತನ್ನ ನೆನಪು ಮತ್ತು ಗ್ರಹಿಕೆಗಳ ಮೂಲಕ ಕಟ್ಟಿಕೊಡುವ ನಿದರ್ಶನ ಶ್ರೀಮತಿ ಸುಚೇತ ಅವರ ಬರವಣಿಗೆಯಲ್ಲಿ ಕಾಣುತ್ತದೆ.

- ಓ.ಎಲ್. ನಾಗಭೂಷಣ ಸ್ವಾಮಿ 

 

ಇದು ಕಲ್ಪಿತ ಕತೆಯಲ್ಲ. ಬದುಕಿದ ಬಾಳು. ನಿಜವಾಗಲೂ ಅನುಭವಿಸಿದ 'ಭಂಗ'ದ ಬವಣೆ. ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಚುರುಕಾಗಿ ಓದಿಸಿಕೊಳ್ಳುತ್ತಾ ನಮ್ಮ ಸಂವೇದನೆಗಳಿಗೆ ಚುರುಕ್ ಎನ್ನುವಂತೆ ಬರೆ ಹಾಕುತ್ತಾ ಸಾಗುವ ಈ ಕಥನ ಈ ಬಗೆಯ ಅನುಭವ ನಿರೂಪಣೆಗಳಲ್ಲೇ ಅಪರೂಪದ್ದಾಗಿ ಮೂಡಿ ಬಂದಿದೆ. ಇದು ಬರಿ ಕಥೆಯಲ್ಲೋ ಅಣ್ಣಾ' ಎಂದು ನಮ್ಮನ್ನು ಹನಿಗಣ್ಣಾಗಿಸುತ್ತದೆ.

- ಬಂಜಗೆರೆ ಜಯಪ್ರಕಾಶ

• We deliver the books you order at beetlebookshop within 3-4 working days via india speed post .

Return of any defective / damage item should be done within 7 days from the date of the receipt of the shipment to our working office.