Your cart is empty now.
ಒಬ್ಬ ವ್ಯಕ್ತಿ ಒಂದು ಬದುಕಿನಲ್ಲಿ ಏನೆಲ್ಲ ಮಾಡಬಹುದು?
ಎಂದು ಕೇಳಿದರೆ ವ್ಯಾಸರನ್ನು ನೋಡಿ ಎನ್ನುತ್ತೇನೆ.
ಅಷ್ಟು ಕೆಲಸ ಅವರದ್ದು!
ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು
ಎಲ್ಲರಿಗೂ ಬೇಕಾಗುವಂತೆ ಆದವರು ಅವರು.
ಜಗತ್ತು ಅವರನ್ನು ಕರೆದು ಅನುಗ್ರಹ ಮಾಡಿಸಿಕೊಂಡದ್ದಿಲ್ಲ;
ಅವರೇ ಹೋಗಿ ಹೋಗಿ ಒಳಿತು ಮಾಡಿದವರು.
ಇಷ್ಟಾರು ರಚನೆಗೆ ಅವರಿಗೆ ಯಾರೂ ಸೂಚಿಸದ್ದಿಲ್ಲ;
ಅವರೇ ಯೋಜಿಸಿ ಬರೆದರು.
`ಒಳಿತು ಮಾಡುವುದು ಕರ್ತವ್ಯ; ಮಾಡುತ್ತಾ ಸಾಗುತ್ತೇನೆ'
ಎಂಬ ವಿಶ್ವಹಿತದ ಭಾವ ಅವರದ್ದು.
ಅವರು ಕೋಪಗೊಂಡದ್ದಿಲ್ಲ, ಶಾಪ ಕೊಟ್ಟದ್ದಿಲ್ಲ, ಬೈದಿದ್ದಿಲ್ಲ; ಭಂಗಿಸಿದ್ದಿಲ್ಲ. ಆದರೆ ಅದೆಷ್ಟು ಜನರ ಬದುಕಿನ ಓರೆಕೋರೆ ತಿದ್ದದ್ದಿರು!
ಲೋಕ ಸದಾ ತನ್ನ ಓರೆಕೋರೆಯನ್ನು ನೋಡಿ ತಿದ್ದಿಕೊಳ್ಳಲು ಬೇಕಾಗುವ ಕನ್ನಡಿಯಂಥ ಕೃತಿಗಳನ್ನು ಕೊಟ್ಟರು.
*
ವ್ಯಾಸರೊಡನೆಯ ಒಂದು ಸಂವಾದ ಇಲ್ಲಿದೆ.
ವಾದವೆಂದರೆ ಮಾತು. ಅವರು ಮಾತಿನ ಮೇರು;
ವಾಙ್ಮಯದ ಚಕ್ರವರ್ತಿ.
ಅವರ ಮಾತೆಲ್ಲ ಸುವಾದವೇ, ಸಂವಾದವೇ.
ಏಕೆ ಮಾತಾಡಬೇಕೋ ಅದಕ್ಕಾಗಿ; ಹೇಗೆ ಮಾತಾಡಬೇಕೋ ಹಾಗೆ ಮಾತಾಡಿ ತೋರಿಸಿದವರು ಅವರು.
ಅವರ ಮಾತೂ, ಅವರ ಮಾತಿನ ವಿಧಾನವೂ ಮಾದರಿಯಾದರೆ
ಈ ಮಾತುಗಳಿಗೆ ಸಾರ್ಥಕತೆ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.