Your cart is empty now.
ಚಂದ ಚಂದ ನನ್ ಹೆಂಡ್ತಿ' ಎಂದು ಚಂದವಾಗಿ ಚಂದನವನಕ್ಕೆ ಕಾಲಿಟ್ಟವರು ಪ್ರಮೋದ್ ಮರವಂತೆ.
ಕಾಂತಾರ ಚಿತ್ರದ 'ಸಿಂಗಾರ ಸಿರಿಯೇ', 'ಇನ್ನೂನು ಬೇಕಾಗಿದೆ', 'ಪರಿಚಯವಾದೆ', 'ನಾ ನಿನಗೆ ನೀ ನನಗೆ' ಇತ್ಯಾದಿ, ಇವರ ಜನಪ್ರಿಯ ಗೀತೆಗಳು.
ಸದ್ಯ ಚಿತ್ರರಂಗದ ಮುಂಚೂಣಿ ಸಾಹಿತಿಗಳಲ್ಲಿ ಒಬ್ಬರಾಗಿ 400ಕ್ಕೂ ಅಧಿಕ ಗೀತೆಗಳನ್ನು ರಚಿಸಿದ್ದಾರೆ. ಹಾಗೆ 5 ಚಿತ್ರಗಳಿಗೆ ಸಂಭಾಷಣೆಯನ್ನು ಬರೆದಿದ್ದಾರೆ.
ಟ್ಯೂನುಗಳಿಗೆ ಪದ ಜೋಡಿಸುತ್ತ ಸುಂದರ ಹಾಡನ್ನು ಹೊಸೆಯುತ್ತಿದ್ದ ಪ್ರಮೋದ್ ಮರವಂತೆ ತಮ್ಮ ಮನಸಲ್ಲಿ ಬಹುವರ್ಷಗಳಿಂದ ಇದ್ದ ಟ್ಯೂನಿಗೆ ಪದ ಪದಗಳು ವಾಕ್ಯ ವಾಕ್ಯಗಳನ್ನು ಜೋಡಿಸಿ ಸುಂದರವಾದ ಕಾದಂಬರಿಯನ್ನೇ ನಮ್ಮ ಕೈಗಿತ್ತಿದ್ದಾರೆ.
ತೊಂಬತ್ತರ ದಶಕದ ಗ್ರಾಮೀಣ ಕಥಾಹಂದರ ಇರುವ ಈ ಕಾದಂಬರಿ ನಿಮ್ಮನ್ನು ಆ ಕಾಲಮಾನಕ್ಕೆ ಕರೆದೊಯ್ಯುವುದು ಖಚಿತ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.