Your cart is empty now.
ರೌದ್ರಾವರಣಂ
ಕಾಡು ಬೇಟೆ, ಹುಡುಕಾಟ, ಕೆಡುಕು, ಸಜ್ಜನಿಕೆ, ಪ್ರೇಮದ ಆಖ್ಯಾನಗಳಿಗಿರುವ ಈ ಕಾದಂಬರಿಯನ್ನು ಓದಿ ಖುಷಿಯಾಯಿತು. ನನ್ನ ಹದಿಹರೆಯದಲ್ಲಿ ಇಂಥ ಕಾದಂಬರಿಗಳನ್ನು ಹುಡುಕಿ ಓದುತ್ತಿದ್ದೆ. ಇವು ಆಗಷ್ಟೇ ಓದಿನತ್ತ ಹೊರಳುತ್ತಿರುವ ತಾರುಣ್ಯಪೂರ್ಣ ಮನಸ್ಸುಗಳಿಗೆ ಅವಶ್ಯಕ ಕೂಡ. ಕನ್ನಡದಲ್ಲಿ ನವ್ಯಪಂಥದ ನಂತರ ಸಾಹಿತ್ಯ ಕ್ಷೇತ್ರ ಇಂಥ ಯಂಗ್ ಅಡಲ್ಟ್ ಫಿಕ್ಷನ್ ಕತೆಗಳನ್ನು ನಿರ್ಲಕ್ಷ್ಯದಿಂದ ಕಾಣತೊಡಗಿತು. ವೈಚಾರಿಕತೆ ಬೇಕು. ಆದರೆ ಮನಸ್ಸಿಗೆ ಸ್ವಲ್ಪ ಮಟ್ಟಿಗೆ ಅಪ್ಪಟವಾದ ಮನರಂಜನೆಯೂ ಬೇಕಾಗುತ್ತದೆ. ಅದರಲ್ಲೂ ಒಂದು ವಯಸ್ಸಿನಲ್ಲಿ ಮನಸ್ಸು ಕಲ್ಪನಾ ಜಗತ್ತಿನಲ್ಲಿ ವಿಹರಿಸಲು ಇಚ್ಚಿಸುತ್ತದೆ. ಅಂಥವರನ್ನು ಓದಿನತ್ತ ಕರೆದು ತರಲು ಈ ರೀತಿಯ ಕುತೂಹಲಕಾರಿ ಕತೆಗಳು ಅವಶ್ಯ. ಈ ಕಾದಂಬರಿಯ ಬಾಬಣ್ಣ, ಅಗಸ್ತ್ಯ, ಪುಷ್ಪಾ, ಮೇಸ್ಟ್ರು, ಚಂದ್ರ, ಶಿಕಾರಿ, ಪೊಲೀಸರ ನಡುವಿನ ಮುಖಾಮುಖಿ -ಎಲ್ಲವೂ ಮುಂದೇನಾಗುತ್ತದೆ ಎಂಬ ಕುತೂಹಲವನ್ನು ಹೆಚ್ಚಿಸುತ್ತಲೇ ಸಾಗುತ್ತದೆ. ಇದನ್ನು ಓದುತ್ತಾ ನಾನು ನನ್ನ ಬಾಲ್ಯಕ್ಕೆ ಮರಳಿದೆ. ಕಳೆದುಹೋದ ದಿನಗಳನ್ನು ಮರಳಿಸುವ ಪುಸ್ತಕಗಳ ಮೇಲೆ ನನಗೆ ಪ್ರೀತಿ
- ಜೋಗಿ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.