Your cart is empty now.
ರೊಅಲ್ಡ್ ದಾಡ್ಲಿನ ಪ್ರತಿಯೊಂದು ಕತೆಯೂ ವಸ್ತುವಿನ ದೃಷ್ಟಿಯಿಂದ ಭಿನ್ನ. ಒಂದರಲ್ಲಿ ಮನುಷ್ಯನ ಮಿದುಳು, ಇನ್ನೊಂದರಲ್ಲಿ ಇಲಿ, ಮತ್ತೊಂದರಲ್ಲಿ ಆಮೆ ಕತೆಯ ಕೇಂದ್ರದಲ್ಲಿರುತ್ತದೆ. ಈ ದೃಷ್ಟಿಯಿಂದ ದಾಹ್ಯ ವೃತ್ತಿಪರ ಬರಹಗಾರ. ತನ್ನ ಕಥಾವೃತ್ತಿಯಲ್ಲಿ ಪುನರುತ್ತಿಗೆ ಅವನು ಅವಕಾಶ ಕೊಡುವುದಿಲ್ಲ. ಯಾವ ಅಂಶಗಳು ಜನರನ್ನು ರಂಜಿಸಬಲ್ಲವು. ಕುತೂಹಲಗೊಳ್ಳುವಂತೆ ಮಾಡಬಲ್ಲವು ಎನ್ನುವುದರ ಅಂದಾಜು ಅವನಿಗಿದೆ. ಹಾಗೆಂದು ಅವನು ಹಾಲಿವುಡ್ನ ಜನಪ್ರಿಯ ವ್ಯಾಪಾರಿ ಸಿನಿಮಾಗಳ ಸೂತ್ರವನ್ನು ಅನುಸರಿಸುವುದಿಲ್ಲ. ಆಧುನಿಕ ಕಥನದಲ್ಲೇ ಇರುವ ಕೆಲವು ರಂಜಕ ಅಂಶಗಳನ್ನು ಇಟ್ಟುಕೊಂಡು ಕತೆಗಳನ್ನು ಕಟ್ಟಿದ್ದಾನೆ. ಅವುಗಳಲ್ಲಿ ಪ್ರಮುಖವಾದದ್ದು ವಿಲಕ್ಷಣ ಅಂತ್ಯ ಅಥವಾ ಓದುಗನ 'ಊಹಾಭಂಗ'. ಇನ್ನೊಂದು, ವಾಸ್ತವವನ್ನು ಮೀರಿ ಒಂದು ಅತಿಗೆ ಹೋಗುವುದು. ಹೀಗಾಗಿ, ಅವನು ತನ್ನ ಕಸುಬಿನಲ್ಲಿ ಗುರಿ ತಪ್ಪದ, ಕಥನದಲ್ಲಿ ತನ್ನದೇ ದಾರಿ ನಿರ್ಮಿಸಿದ ಬರಹಗಾರ.
ದಾಣ್ಣಿನ ಮೋಡಿಗೆ ಸಿಲುಕಿರುವ ಜಿ.ವಿ. ಕಾರ್ಲೊ, ಅವನ ಹನ್ನೊಂದು ಕತೆಗಳನ್ನು ಅನುವಾದಿಸಿ ಪ್ರಸ್ತುತ ಸಂಪುಟವನ್ನು ಪ್ರಕಟಿಸುತ್ತಿದ್ದಾರೆ. ಇದರಲ್ಲಿ ಭಿನ್ನಡವಿ, ಧಾಟಿ, ನಿರೂಪಣೆಯ ಕತೆಗಳಿವೆ. ಕತೆಯನ್ನು ರುಚಿಕಟ್ಟಾಗಿ, ಕುತೂಹಲಕ್ಕೆ ಭಂಗವಾಗದಂತೆ ಹೇಳುವ ದಾಹನ ಎಂದಿನ ಕುಶಲ ನಿರೂಪಣೆಯಲ್ಲಿ ಅವು ಮೈತಳೆದಿವೆ. ಕಾರ್ಲೊ ಅವರಿಗೆ ದಾಹ್ ರಕ್ತಗತನಾದ ಕತೆಗಾರ. ಅವನ ಎಲ್ಲ ಕುಶಲತೆ, ಪಟ್ಟು, ಸೂಕ್ಷ್ಮಗಳನ್ನು ಬಲ್ಲ ಅವರು ಅವುಗಳನ್ನು ಕನ್ನಡದ ಕನ್ನಡಿಯಲ್ಲಿ ಪ್ರತಿಫಲಿಸಿದ್ದಾರೆ. ಸ್ಪಟಿಕ ಸ್ಪಷ್ಟವಾದ ಆ ಪ್ರತಿಫಲನ ಕನ್ನಡದ ಓದುಗರನ್ನು ಬಹುಕಾಲ ಸೆಳೆಯಬಲ್ಲದು, ಖುಷಿಗೊಳಿಸಬಹುದು ಎಂಬುದು ನನ್ನ ನಂಬಿಕೆ.
-ಸಂದೀಪ ನಾಯಕ
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.