Your cart is empty now.
ಇಲ್ಲಿರುವ ಬಹುತೇಕ ಕತೆಗಳೂ ಕನ್ನಡ ಸಾಹಿತ್ಯ ನವ್ಯ ಸಾಹಿತ್ಯದ ಉತ್ತುಂಗದಲ್ಲಿ ಇದ್ದಾಗ ಬರೆದಾಗಿನ ಕತೆಗಳು, ನವ್ಯ ಸಾಹಿತ್ಯ ಮನುಷ್ಯನ ಅನುಭವಕ್ಕೆ ಮತ್ತು ಆಂತರಿಕ ಭಾವನೆಗಳಿಗೆ ಆದ್ಯತೆ ನೀಡುತ್ತದೆ. ಸಾಂಪ್ರದಾಯಿಕ ಶೈಲಿಯನ್ನು ಬಿಟ್ಟು ಹೊಸ ರೀತಿಯ ಪ್ರಸ್ತುತಿಯನ್ನು ನವ್ಯ ಸಾಹಿತ್ಯ ಬಯಸುತ್ತದೆ. ಪ್ರತಿಮೆ ಮತ್ತು ರೂಪಕಗಳ ಮೂಲಕ ಕತೆಯನ್ನು ಹೇಳುವುದು
ನವ್ಯ ಸಾಹಿತ್ಯದ ವಿಶಿಷ್ಟತೆ. ಇಂತಹ ಪ್ರಯತ್ನದಲ್ಲಿ ನಾರಾಯಣ ಗಿಂಡೀಮನೆ ಅವರು ಯಶಸ್ವಿಯಾಗಿದ್ದಾರೆ. ಗಿಂಡೀಮನೆ ಅವರಿಗೆ ಕಥನ ಕಲೆ ಸಹಜವಾಗಿಯೇ ಸಿದ್ಧಿಸಿದೆ. ಇಲ್ಲಿರುವ ಯಾವ ಕತೆಗಳಲ್ಲಿಯೂ ಅವಸರವಿಲ್ಲ. ಆಕ್ರೋಶವಿಲ್ಲ. ಯಾವುದೂ ಕೃತಕ ಎನ್ನಿಸುವುದಿಲ್ಲ. ಸಹಜವಾದ ಕತೆಗಳು. ಭಾಷೆಯೂ ಸರಳ. ಸಾಹಿತ್ಯ ಇರುವುದು ಅರ್ಥವಾಗುವುದಕ್ಕೆ ಅಲ್ಲ, ಅರ್ಥ ಮಾಡಿಕೊಳ್ಳುವುದಕ್ಕೆ ಎಂಬ ಮಾತೊಂದಿದೆ. ಆದರೆ ಇಲ್ಲಿನ ಕತೆಗಳು ಸರಳವಾಗಿ ಅರ್ಥವಾಗುತ್ತವೆ. ಆಳಕ್ಕೆ ಇಳಿದರೆ ಹೊಸ ಹೊಸ ಅರ್ಥಗಳನ್ನೂ ಸೂಸುತ್ತವೆ.
- ರವೀಂದ್ರಭಟ್ಟ
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.