Your cart is empty now.
ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ ಐತಿಹಾಸಿಕ ಕಾದಂಬರಿ-ಧರ್ಮ ಚಕ್ರವರ್ತಿ ಅಶೋಕ. ಭಾರತೀಯ ತತ್ವಶಾಸ್ತ್ರ, ಧರ್ಮಶಾಸ್ತ್ರದಲ್ಲಿ ಅಶೋಕ ಚಕ್ರವರ್ತಿಯ ನಡೆ-ನುಡಿ-ತ್ಯಾಗ ಹಾಗೂ ಸಮಸ್ತ ಮನುಕುಲದ ಉದ್ಧಾರಕ್ಕೆ ಯುದ್ಧ ತ್ಯಜಿಸಿದ ದೃಢ ನಿರ್ಧಾರವು ಐತಿಹಾಸಿಕವಾಗಿ ಮನ್ನಣೆಗೆ ಪಾತ್ರವಾಗಿದೆ. ಬೌದ್ಧ ಧರ್ಮವನ್ನು ಸ್ವೀಕರಿಸಿ ಅದರ ಪ್ರಚಾರಕ್ಕಾಗಿ ತನ್ನ ಅಂತಿಮ ದಿನಗಳನ್ನು ಮೀಸಲಿಟ್ಟ ದಿಟ್ಟ ವ್ಯಕ್ತಿತ್ವದ ಸಂಕೇತವಾಗಿ ಅಶೋಕನು ಕಂಗೊಳಿಸುತ್ತಾನೆ. ಇಂತಹ ಉದಾತ್ತ ಗುಣಧರ್ಮದ ಅಶೋಕನ ವ್ಯಕ್ತಿತ್ವದ ಪರಿಚಯವಾಗಿ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ. ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇಂತಹ ಸಾಹಿತ್ಯಕ ಅಂಶಗಳು ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.