Your cart is empty now.
ಕಳೆದೆರಡು ದಶಕದಿಂದೀಚೆಗೆ ಕರ್ನಾಟಕ ಮತ್ತು ದೇಶದಲ್ಲಿ ಬುದ್ಧ ತಳಸಮುದಾಯಗಳಲ್ಲಿ ಸಾಂಸ್ಕೃತಿಕ ಎಚ್ಚರವನ್ನು ಉಂಟುಮಾಡುತ್ತಿದ್ದಾನೆ ಎಂಬುದು ತಿಳಿದ ವಿಷಯವೇ ಆಗಿದೆ. ದುಡಿಯುವ ವರ್ಗದ ಆ ಜನರಿಗೆ ಬುದ್ಧನನ್ನು ಅರ್ಥಮಾಡಿಸುವುದು ಹೇಗೆ? ಈ ದೇವರಲ್ಲದ ದೇವರನ್ನು ತಿಳಿಯುವ ಬಗೆ ಹೇಗೆ? ಎಂಬುದೇ ಸಂಸ್ಕೃತಿ ಚಿಂತಕರ ಸಮಸ್ಯೆಯಾಗಿದೆ. ಧರ್ಮವೆಂಬ ಸಾಂಸ್ಥಿಕ ಚೌಕಟ್ಟಿನ ಒಳಗಡೆ ಜೀವರ (ಕಾವಿ ಹೊದಿಕೆ) ಧರಿಸುವ ಭಂತೇಜಿಯವರ ಭಾಷೆಯನ್ನು ಒಮ್ಮೆಲೆ ಗ್ರಹಿಸುವುದು ಕಷ್ಟಸಾಧ್ಯ. ಅದಕ್ಕೆ ಸಾಂಸ್ಕೃತಿಕ 'ದನಿ'ಯೊಂದರ ಅಗತ್ಯವಿದೆ. ಅದನ್ನು ಕಾವ್ಯ, ನಾಟಕ, ಮುತಾದುವು ಪೂರೈಸಬಲ್ಲವು. ಈ ದೃಷ್ಟಿಯಲ್ಲಿ ನೋಡಿದಾಗ 'ಬುದ್ಧ ಚರಿತೆ' ನಿರಾಳ ಓದಿಸಿಕೊಳ್ಳುವ ಕೃತಿ. ತಿಳಿಯಾಗಿ ಒಳಗಿಳಿಯುವ ಕೃತಿ.
ಕಾಡನ್ನು ಪ್ರೀತಿಸುವ ಇವರು ಅಳವಡಿಸಿಕೊಂಡಿರುವ ಕಥನ ಕ್ರಮವೂ ಆಕರ್ಷಕವಾಗಿದೆ. ಸದಾ ಜುಂಯ್ಗುಡುವ ಜೀರುಂಡೆಗೆ ಕಥೆ ಹೇಳುತ್ತಾರೆ. ಅದರ ಸದ್ದು ನಿಲ್ಲಿಸಿ ಆತ್ಮ ನಿರೀಕ್ಷೆಗೆ ಹಚ್ಚುತ್ತಾರೆ. ಅದು ಓದುಗರ ಅನುಭವವೂ ಆಗಬಲ್ಲದು. ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಅನುಪಮಾ, ಸಿದ್ದಾರ್ಥ ಗೌತಮನ ಅಭಿನಿಷ್ಮಮಣವನ್ನು ಕುರಿತಾದ ತಥಾಕಥಿತ ಮಾದರಿಯಿಂದ ಹೊರಗೆ ಬಂದು ಬಾಬಾಸಾಹೇಬ್ ಅಂಬೇಡ್ಕರರ ಮಾರ್ಗವನ್ನು ಅನುಸರಿಸಿರುವುದು.
- ಮೂಡ್ನಾಕೂಡು ಚಿನ್ನಸ್ವಾಮಿ
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.