Your cart is empty now.
ಸಮಾಜೋ ರಾಜಕೀಯ ಕಾರಣಗಳಿಗಾಗಿ ಒಕ್ಕಲೆದ್ದವರನ್ನು ನಾವು ಇತಿಹಾಸದಲ್ಲಿ ನೋಡಿದ್ದೇವೆ. ಅಂಥಹ ಡಯಾಸ್ಪೋರಿಕ್ ಸಾಹಿತ್ಯದ ಸಾಧ್ಯತೆಯಾಗಿ ಅಮರೇಶ ಗಿಣಿವಾರರ 'ಬಾಂಗ್ಲಾದ ಹಕ್ಕಿಗಳು' ಕತೆಯನ್ನು ಒಮ್ಮೆ ಓದಿ ನೋಡಬೇಕು. 'ಹಿಂಡೆಕುಳ್ಳು' ಹಾಗೂ 'ಶಿವನಕುದುರೆ' ಕತೆಗಳ ನಂತರ ಈ ಕತೆ ನನಗೆ ಮೆಚ್ಚುಗೆಯಾಯಿತು.
ತನ್ನದಲ್ಲದ ಪಾತ್ರಗಳ ಮನೋಭೂಮಿಕೆ ನಿರ್ಮಿಸುವಲ್ಲಿ ಒಬ್ಬ ಲೇಖಕ ಇಟ್ಟುಕೊಳ್ಳಬೇಕಾದ ಆರೋಗ್ಯಕರ ಅಂತರಕ್ಕೆ ಒಂದು ಉದಾಹರಣೆಯಾಗಿ ಈ ಕತೆ ನನಗೆ ಕಾಣಿಸಿದೆ. ಒಂದು ಹೊಸ ಸಂವೇದನೆ ನಿಜವಾದ ಅರ್ಥದಲ್ಲೂ ಅದು ಹೊಸದಾಗಿದ್ದರೆ, ತಾನು ಮೈದಾಳುವ ಭಾಷೆಯ ನುಡಿಗಟ್ಟನ್ನೇ ಅಲುಗಾಡಿಸಿಬಿಡುತ್ತದೆ. ಕೆಲವೊಮ್ಮೆ ಬದಲಿಸಿಯೂ ಬಿಡುತ್ತದೆ. ಗಿಣಿವಾರರ ಕತೆಗಳನ್ನು ಅವರು ಬಳಸುವ ಭಾಷೆಯ ಸಾಂದ್ರತೆಗಾಗಿ ಓದಬೇಕೆನಿಸುತ್ತದೆ. ಸಾಂದ್ರತೆ ಇಲ್ಲಿನ ಕತೆಗಳ ಪ್ರಾಥಮಿಕ ಲಕ್ಷಣ. ಇದಕ್ಕೆ ತಕ್ಕಂತೆ ಚಲನಶೀಲ ಗುಣ ದಕ್ಕಿಸಿಕೊಂಡರೆ ಈ ಕತೆಗಳ ವಿಧಿಬರಹವೇ ಬದಲಾಗಲಿದೆ. ಹೀಗಾಗಿ ಈ ಸಂಕಲನದ 'ಗಂಟಲಿನ ಚಿಟ್ಟೆ' ಒಂದು ಕುತೂಹಲಕರ ಕತೆ. ಲೇಖಕರ ಇನ್ನೊಂದು ಬಗೆಯ ಶಕ್ತಿಯನ್ನು ಅನಾವರಣಗೊಳಿಸುವ ಅಪರೂಪದ ಕತೆ. ಇದೇ ಸಂಕಲನದ 'ಹಸಿಬೆ' ಕತೆಯ ಶಕ್ತಿ ಹಾಗೂ ಮಿತಿಗಳ ಹಿನ್ನೆಲೆಯಲ್ಲಿ ಇದನ್ನು ವಿವರಿಸಿಕೊಳ್ಳಬೇಕು.
- ಆರಿಫ್ ರಾಜಾ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.