Your cart is empty now.
Free Shipping Charge on Orders above ₹500. COD available
ವಯನಾಡು ದುರಂತದ ವರದಿಗಾರಿಕೆಗೆ ನಾನೂ ಹೋಗಿದ್ದೆ. ಆಶಿಕ್ ಮುಲ್ಕಿಯ ಪರಿಚಯ ಆದದ್ದು ದುರಂತಭೂಮಿಯಲ್ಲೇ. ಪಾದರಸದಂಥ ವ್ಯಕ್ತಿತ್ವ ಮತ್ತು ಚುರುಕು ಬುದ್ದಿಯ ಮೂಲಕ ಅವರು ಸುದ್ದಿಗಳನ್ನು ಹೆಕ್ಕುತ್ತಿದ್ದಿದನ್ನು ಗಮನಿಸಿದ್ದೆ. ಆತ್ಮೀಯತೆ, ಮಾನವ ಪ್ರೇಮ, ಸಕಲ ಜೀವಿಗಳಿಗೆ ಒಳಿತು ಬಯಸುವ ಉದಾರ ಮನಸ್ಸು ಅವರದ್ದು. ವಯನಾಡಿನಿಂದ ವಾಪಸಾದ ಕೆಲವೇ ದಿನಗಳಲ್ಲಿ ಅಲ್ಲಿನ ಅನುಭವಗಳು ಕೃತಿರೂಪದಲ್ಲಿ ಮೂಡಿ ಬರಲು ಇಂಥ ಗುಣಗಳೇ ಪ್ರೇರಕ. ಅದು ಇಲ್ಲಿನ ಬರವಣಿಗೆಯಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ವಯನಾಡಿನ ಮೇಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂರಲ್ಮಲ, ಮುಂಡಕ್ಕೆ ಮತ್ತು ಪುಂಜಿರಿಮಟ್ಟಂನಲ್ಲಿ ಸಂಭವಿಸಿದ ಭೂಕುಸಿತದ ನಂತರ ಕಂಡುಬಂದ ದೃಶ್ಯಗಳು ಹೃದಯವಿದ್ರಾವಕ.
- ವಿಕ್ರಂ ಕಾಂತಿಕೆರೆ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.