Your cart is empty now.
ಜಗಳೂರನ್ನು ತಳಹದಿಯಾಗಿಟ್ಟುಕೊಂಡು ಚಿತ್ರದುರ್ಗ ಜಿಲ್ಲೆಯ ಮೈಸೂರಿನ ಅರ್ಥಾತ್ ಕರ್ನಾಟಕದ ಹಾಗೂ ಭಾರತದ ರಾಜಕಾರಣದಲ್ಲಿ ಸಕ್ರಿಯವಾಗಿ ಭಾಗವಹಿಸಿದರು ದಿವಂಗತ ಜೆ. ಮಹಮದ್ ಇಮಾಂ ಅವರು ಬ್ರಿಟಿಷರ ಆಡಳಿತ ಸಂದರ್ಭದ ಪ್ರಜಾಪ್ರತಿನಿಧಿ ಸರಕಾರದಿಂದ ತೊಡಗಿ ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ತಮ್ಮ ಪ್ರತಿನಿಧಿತ್ವವನ್ನು ಸಮರ್ಥವಾಗಿ ಮಂಡಿಸಿದರು. ತಮಗೆ ತಮ್ಮ ಪಕ್ಷವೇ ಮುಖ್ಯವೆಂದು ಭಾವಿಸಿದರು ರಾಜ್ಯದ, ರಾಷ್ಟ್ರದ ಹಿತಕ್ಕೆ ಧಕ್ಕೆ ಬರುವುದಾದರೆ ಪಕ್ಷವನ್ನು ಮೀರಿ ಬೆಳೆದವರು. ರಾಜಕಾರಣವನ್ನು ವೃತ್ತಿಯೆಂದು ಯಾವತ್ತು ಭಾವಿಸಲಿಲ್ಲ ಬದಲಾಗಿ ಅದೊಂದು ಸೇವೆ. ತ್ಯಾಗ ಎಂದೇ ಆಜೀವ ಪರ್ಯಂತ ಪರಿಗಣಿಸಿದವರು. ಹಾಗಾಗಿ ಅವರು ತಮ್ಮ ರಾಜಕೀಯ ಬದುಕನ್ನು ಸಾತ್ವಿಕವಾಗಿ ಪ್ರಾಮಾಣಿಕವಾಗಿ ಕಳೆಯಲು ಸಾಧ್ಯವಾಯಿತು. ಇಂದಿನ ಕಲುಷಿತ ವಾತವರಣದಲ್ಲಿ ಇಂತಹವರ ಬದುಕು ನಮಗೆ ಆದರ್ಶ ಹಾಗೂ ಅನುಕರಣೀಯ ಎಂದು ಭಾವಿಸುತ್ತೇವೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.