Your cart is empty now.
ಗೌತಮ ಬುದ್ಧನ ಕುರಿತು ನಾನು ರಚಿಸಿದ 'ಮಹಾಕಾರುಣಿಕ' ದ ಮುಂದುವರಿಕೆಯಾಗಿ ಬರೆದ ಇನ್ನೊಂದು ಸ್ವತಂತ್ರ ಐತಿಹಾಸಿಕ ಕಾದಂಬರಿ 'ಮಹಾವಿನಾಶ'. ಇದು ಮೌರ್ಯ ವಂಶದ ಉತ್ಕರ್ಷ ಮತ್ತು ಅವನತಿಯನ್ನು ವಿಸ್ತಾರವಾಗಿ ಹೇಳುತ್ತದೆ. ಅಲೆಕ್ಸಾಂಡರನ ಭಾರತದ ಮೇಲಿನ ದಂಡಯಾತ್ರೆ, ಚಂದ್ರಗುಪ್ತ ಮೌರ್ಯನ ಪರಾಕ್ರಮ, ತದನಂತರದಲ್ಲಿ ಸಿಂಹಾಸನವನ್ನು ದಕ್ಕಿಸಿಕೊಂಡ ಅಶೋಕನ ಕ್ರೌರ್ಯ, ಕಳಿಂಗ ಯುದ್ಧದ ನಂತರ ಅವನಲ್ಲಾದ ಮನಃಪರಿವರ್ತನೆ, ಬೌದ್ಧಧರ್ಮದ ಪ್ರಭಾವ, ಭರತ ಖಂಡದ ಉದ್ದಗಲಕ್ಕೂ, ವಿದೇಶಗಳಲ್ಲೂ ಆ ಧರ್ಮದ ಪ್ರಚಾರ ಮೊದಲಾದವುಗಳ ಕುರಿತೂ ಈ ಕೃತಿ ಹೇಳುತ್ತದೆ. ಆನಂತರದಲ್ಲಿ ರಾಜಸತ್ತೆಯಲ್ಲಿ ಉಂಟಾದ ಏಳುಬೀಳುಗಳು, ಅಶೋಕನ ನಂತರ ಸಿಂಹಾಸನವನ್ನೇರಿದ ಮೌರ್ಯರ ಕೆಲವು ದುರ್ಬಲ ದೊರೆಗಳು, ಕೊನೆಯ ದೊರೆ ಬ್ರಹದೃಥನನ್ನು ಅವನ ಸೇನಾಪತಿ ಪುಷ್ಯಮಿತ್ರ ಶುಂಗನೇ ಹತ್ಯೆ ಮಾಡಿದ್ದು ಮನುಸ್ಮೃತಿಯ ರಚನೆ ನಡೆದದ್ದು ಮುಂತಾದ ಘಟನೆಗಳನ್ನು ಈ ಕಾದಂಬರಿ ಕಣ್ಣಿಗೆ ಕಟ್ಟುವ ಹಾಗೆ ಕಟ್ಟಿಕೊಡುತ್ತದೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.