Free Shipping Charge on Orders above ₹300

Shop Now

Dr. K N Ganeshaiah New 3 Books Sale -15%
Rs. 420.00Rs. 495.00
Vendor: BEETLE BOOK SHOP
Type: PRINTED BOOKS
Availability: 51 left in stock

ಹೊಕ್ಕಳ ಮೆದುಳು

ನ್ಯೂಯಾರ್ಕ್‌ನಲ್ಲಿ ಆಯೋಜಿಸಿದ್ದ 'ವಿಜ್ಞಾನ, ಧರ್ಮ ಮತ್ತು ಆಧ್ಯಾತ್ಮಿಕತೆ' ಎಂಬ ಅಂತಾರಾಷ್ಟ್ರೀಯ ಕಮ್ಮಟದಲ್ಲಿ ಭಾಗವಹಿಸಿಲು ಆಹ್ವಾನಿತಗೊಂಡಿದ್ದ ಭಾರತದ ಧರ್ಮಗುರುಗಳು ಅಚ್ಚರಿಯ ವಿದ್ಯಮಾನವೊಂದಕ್ಕೆ ಸಾಕ್ಷಿಯಾಗುತ್ತಾರೆ. ಅಲ್ಲಿನ ಮಾನಸಿಕ ಆಸ್ಪತ್ರೆಯಲ್ಲಿ ನಡೆದ ದುರಂತವೊಂದಕ್ಕೆ ಇಂದಿನ ನ್ಯಾಯಪದ್ಧತಿಯ ಆವರಣದಲ್ಲಿ ಸೂಕ್ತ ಮತ್ತು ಸಿದ್ದ ಪರಿಹಾರ ಸಿಗದ ಕಾರಣ, ವಿಜ್ಞಾನಿಗಳ, ನ್ಯಾಯಪಾಲಕರ ಮತ್ತು ಧರ್ಮಗುರುಗಳ ನಡುವೆ ಒಂದು ಜಾಗತಿಕ ಚರ್ಚೆಯನ್ನು ಏರ್ಪಡಿಸಲಾಗಿರುತ್ತದೆ. ಮಾನಸಿಕ ಸ್ಥಿತಿಯಲ್ಲಾಗುವ ಪಲ್ಲಟಗಳ ಬಗ್ಗೆ ನಡೆದ ಈ ಚರ್ಚೆಯಲ್ಲಿ ಎದುರಾಗುವ ಗೊಂದಲಗಳ ಮತ್ತು ಸವಾಲುಗಳ ಮೂಲಕ ಆಸ್ಪತ್ರೆಯಲ್ಲಿ ನಡೆದ ದುರಂತ ವಿವರಗಳು ಅನಾವರಣಗೊಳ್ಳುವ ಕುತೂಹಲಕಾರಿ ಕಥನ ಇಲ್ಲಿದೆ.

*****
ಇಮ್ಮಡಿ ಮಡಿಲು

ಕ್ರಿ.ಶ. ಏಳನೇ ಶತಮಾನದಲ್ಲಿ ಚಾಲುಕ್ಯರ ಬಾದಾಮಿಯನ್ನು ಗೆದ್ದ ಪಲ್ಲವರ ಸೇನಾಧಿಪತಿ, ಅಲ್ಲಿನ ಅರಮನೆಯಿಂದ ತನ್ನ ರಾಜನಿಗೆ ಅಭಿಮಾನದಿಂದ ಕಳುಹಿಸಿದ ಎರಡು 'ರತ್ನ'ಗಳು ಕೊನೆಗೆ ಆತನಿಗೇ ಮುಳುವಾಗುತ್ತವೆ. ಆ ರತ್ನಗಳಿಂದಾಗಿ ತನ್ನ ಬದುಕಿನ ಕರಾಳ ರಹಸ್ಯವೊಂದರ ಪರಿಚಯವಾದಾಗ, ಆ ಸೇನಾಧಿಪತಿ, ಬಾದಾಮಿಯಿಂದಲೇ ತಂದ ಗಣೇಶನ ಮೂರ್ತಿಯಲ್ಲಿ ಮೊರೆ ಹೋಗಿ, ಸನ್ಯಾಸ ಜೀವನ ಸಾಗಿಸುತ್ತಾನೆ. ಆತನಿಗೆ ನೆಮ್ಮದಿ, ಶಾಂತಿ ನೀಡಿದ ಅದೇ ಗಣಪತಿ ಮೂರ್ತಿ, ಸಾವಿರ ವರ್ಷಗಳ ನಂತರ ಮುತ್ತುಸ್ವಾಮಿ ದೀಕ್ಷಿತರ 'ವಾತಾಪಿ ಗಣಪತಿಂ ಭಜೇ' ಕೀರ್ತನೆಗೂ ಸ್ಫೂರ್ತಿಯಾಗುತ್ತದೆ. ಈ ಘಟನೆಗಳ ಸುತ್ತ ಹೆಣೆದ ಚಾರಿತ್ರಿಕ ಕಥೆ 'ಇಮ್ಮಡಿ ಮಡಿಲು'.

******
ಅಜ್ಞಾತ ಚಿತ್ತದತ್ತ ಒಂದು ಹೆಜ್ಜೆ

ಅರಿವು ಗೆದ್ದಷ್ಟೂ ಅದು ಅಜ್ಞಾತದ ಮುಂದೆ ಮಂಡಿಯೂರುತ್ತದೆ. ಕಾರಣ ಅಜ್ಞಾತದ ಕತ್ತಲು ಬಗೆದಷ್ಟೂ ದಟ್ಟವೂ ಅನಂತವೂ ಆಗುತ್ತದೆ. ನಮ್ಮ ಚಿತ್ತದ ಸುತ್ತ ಆವರಿಸಿಕೊಂಡಿರುವ ಅಜ್ಞಾತದ ಕತ್ತಲಿನೆಡೆಗೆ ಬೆಳಕು ಚೆಲ್ಲುವ ಒಂದೇ ದಾರಿ ಎಂದರೆ, ನಮ್ಮ ಚಿತ್ತವನ್ನು ಚಿತ್ತದಿಂದಲೇ ಅರಿಯಲು ಪ್ರಯತ್ನಿಸುವುದು. ಆಗ ಮೂಡುವ ಮಂದಬೆಳಕಲ್ಲಿ ಜೀವ ಜಗತ್ತಿನ ಅದ್ಭುತಗಳು ಮಬ್ಬು ಮಬ್ಬಾಗಿ ಕಾಣತೊಡಗುತ್ತವೆ. ನಾವು ಕೇವಲ ನಾವಲ್ಲ ಎಂಬ ಅಚ್ಚರಿ, ಅಸೂಯೆ, ದ್ವೇಷ ಮುಂತಾದವು ನಮ್ಮನ್ನು ಗೆದ್ದುಕೊಂಡಿರುವ ಪರಿ, ರಾವಣನಂತಹ ಶತ್ರುಗಳೇ ನಮ್ಮ ರಕ್ಷಕರಾಗಿರುವ ವೈಚಿತ್ಯ....
ಮುಂತಾದವುಗಳ ಅಸ್ಪಷ್ಟ ಪರಿಚಯವಾಗತೊಡಗುತ್ತದೆ. ನಮ್ಮ ಚಿತ್ತದ ಅಜ್ಞಾತದತ್ತ ಒಂದು ಹೆಜ್ಜೆ ನಡೆಯುವುದೇ ಇಲ್ಲಿನ ಲೇಖನಗಳ ಉದ್ದೇಶ.

Guaranteed safe checkout

Dr. K N Ganeshaiah New 3 Books
- +

ಹೊಕ್ಕಳ ಮೆದುಳು

ನ್ಯೂಯಾರ್ಕ್‌ನಲ್ಲಿ ಆಯೋಜಿಸಿದ್ದ 'ವಿಜ್ಞಾನ, ಧರ್ಮ ಮತ್ತು ಆಧ್ಯಾತ್ಮಿಕತೆ' ಎಂಬ ಅಂತಾರಾಷ್ಟ್ರೀಯ ಕಮ್ಮಟದಲ್ಲಿ ಭಾಗವಹಿಸಿಲು ಆಹ್ವಾನಿತಗೊಂಡಿದ್ದ ಭಾರತದ ಧರ್ಮಗುರುಗಳು ಅಚ್ಚರಿಯ ವಿದ್ಯಮಾನವೊಂದಕ್ಕೆ ಸಾಕ್ಷಿಯಾಗುತ್ತಾರೆ. ಅಲ್ಲಿನ ಮಾನಸಿಕ ಆಸ್ಪತ್ರೆಯಲ್ಲಿ ನಡೆದ ದುರಂತವೊಂದಕ್ಕೆ ಇಂದಿನ ನ್ಯಾಯಪದ್ಧತಿಯ ಆವರಣದಲ್ಲಿ ಸೂಕ್ತ ಮತ್ತು ಸಿದ್ದ ಪರಿಹಾರ ಸಿಗದ ಕಾರಣ, ವಿಜ್ಞಾನಿಗಳ, ನ್ಯಾಯಪಾಲಕರ ಮತ್ತು ಧರ್ಮಗುರುಗಳ ನಡುವೆ ಒಂದು ಜಾಗತಿಕ ಚರ್ಚೆಯನ್ನು ಏರ್ಪಡಿಸಲಾಗಿರುತ್ತದೆ. ಮಾನಸಿಕ ಸ್ಥಿತಿಯಲ್ಲಾಗುವ ಪಲ್ಲಟಗಳ ಬಗ್ಗೆ ನಡೆದ ಈ ಚರ್ಚೆಯಲ್ಲಿ ಎದುರಾಗುವ ಗೊಂದಲಗಳ ಮತ್ತು ಸವಾಲುಗಳ ಮೂಲಕ ಆಸ್ಪತ್ರೆಯಲ್ಲಿ ನಡೆದ ದುರಂತ ವಿವರಗಳು ಅನಾವರಣಗೊಳ್ಳುವ ಕುತೂಹಲಕಾರಿ ಕಥನ ಇಲ್ಲಿದೆ.

*****
ಇಮ್ಮಡಿ ಮಡಿಲು

ಕ್ರಿ.ಶ. ಏಳನೇ ಶತಮಾನದಲ್ಲಿ ಚಾಲುಕ್ಯರ ಬಾದಾಮಿಯನ್ನು ಗೆದ್ದ ಪಲ್ಲವರ ಸೇನಾಧಿಪತಿ, ಅಲ್ಲಿನ ಅರಮನೆಯಿಂದ ತನ್ನ ರಾಜನಿಗೆ ಅಭಿಮಾನದಿಂದ ಕಳುಹಿಸಿದ ಎರಡು 'ರತ್ನ'ಗಳು ಕೊನೆಗೆ ಆತನಿಗೇ ಮುಳುವಾಗುತ್ತವೆ. ಆ ರತ್ನಗಳಿಂದಾಗಿ ತನ್ನ ಬದುಕಿನ ಕರಾಳ ರಹಸ್ಯವೊಂದರ ಪರಿಚಯವಾದಾಗ, ಆ ಸೇನಾಧಿಪತಿ, ಬಾದಾಮಿಯಿಂದಲೇ ತಂದ ಗಣೇಶನ ಮೂರ್ತಿಯಲ್ಲಿ ಮೊರೆ ಹೋಗಿ, ಸನ್ಯಾಸ ಜೀವನ ಸಾಗಿಸುತ್ತಾನೆ. ಆತನಿಗೆ ನೆಮ್ಮದಿ, ಶಾಂತಿ ನೀಡಿದ ಅದೇ ಗಣಪತಿ ಮೂರ್ತಿ, ಸಾವಿರ ವರ್ಷಗಳ ನಂತರ ಮುತ್ತುಸ್ವಾಮಿ ದೀಕ್ಷಿತರ 'ವಾತಾಪಿ ಗಣಪತಿಂ ಭಜೇ' ಕೀರ್ತನೆಗೂ ಸ್ಫೂರ್ತಿಯಾಗುತ್ತದೆ. ಈ ಘಟನೆಗಳ ಸುತ್ತ ಹೆಣೆದ ಚಾರಿತ್ರಿಕ ಕಥೆ 'ಇಮ್ಮಡಿ ಮಡಿಲು'.

******
ಅಜ್ಞಾತ ಚಿತ್ತದತ್ತ ಒಂದು ಹೆಜ್ಜೆ

ಅರಿವು ಗೆದ್ದಷ್ಟೂ ಅದು ಅಜ್ಞಾತದ ಮುಂದೆ ಮಂಡಿಯೂರುತ್ತದೆ. ಕಾರಣ ಅಜ್ಞಾತದ ಕತ್ತಲು ಬಗೆದಷ್ಟೂ ದಟ್ಟವೂ ಅನಂತವೂ ಆಗುತ್ತದೆ. ನಮ್ಮ ಚಿತ್ತದ ಸುತ್ತ ಆವರಿಸಿಕೊಂಡಿರುವ ಅಜ್ಞಾತದ ಕತ್ತಲಿನೆಡೆಗೆ ಬೆಳಕು ಚೆಲ್ಲುವ ಒಂದೇ ದಾರಿ ಎಂದರೆ, ನಮ್ಮ ಚಿತ್ತವನ್ನು ಚಿತ್ತದಿಂದಲೇ ಅರಿಯಲು ಪ್ರಯತ್ನಿಸುವುದು. ಆಗ ಮೂಡುವ ಮಂದಬೆಳಕಲ್ಲಿ ಜೀವ ಜಗತ್ತಿನ ಅದ್ಭುತಗಳು ಮಬ್ಬು ಮಬ್ಬಾಗಿ ಕಾಣತೊಡಗುತ್ತವೆ. ನಾವು ಕೇವಲ ನಾವಲ್ಲ ಎಂಬ ಅಚ್ಚರಿ, ಅಸೂಯೆ, ದ್ವೇಷ ಮುಂತಾದವು ನಮ್ಮನ್ನು ಗೆದ್ದುಕೊಂಡಿರುವ ಪರಿ, ರಾವಣನಂತಹ ಶತ್ರುಗಳೇ ನಮ್ಮ ರಕ್ಷಕರಾಗಿರುವ ವೈಚಿತ್ಯ....
ಮುಂತಾದವುಗಳ ಅಸ್ಪಷ್ಟ ಪರಿಚಯವಾಗತೊಡಗುತ್ತದೆ. ನಮ್ಮ ಚಿತ್ತದ ಅಜ್ಞಾತದತ್ತ ಒಂದು ಹೆಜ್ಜೆ ನಡೆಯುವುದೇ ಇಲ್ಲಿನ ಲೇಖನಗಳ ಉದ್ದೇಶ.

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading