Your cart is empty now.
ನಾವು ಹೆಚ್ಚಿನ ಸಾರಿ ರಾಜಕಾರಣ, ಸರ್ವಾಧಿಕಾರ, ಇಕಾಲಜಿ, ಕಲೆ, ಜ್ಞಾನ, ಮಕ್ಕಳು, ಶಿಕ್ಷಣ, ಧರ್ಮ, ಪುರಾಣ ಇಂತ ಹಲವು ಸಂಕೀರ್ಣ ವಿಷಯಗಳನ್ನ 'ಮೇಲಿನವರ' ಮತ್ತು 'ದೂರದ' ಕಣೋಟದಿಂದ ನೋಡಿ ಗ್ರಹಿಸಲು ಪ್ರಯತ್ನಿಸುತ್ತೇವೆ. ಇಲ್ಲಿನ ಬರಹಗಳಲ್ಲಿ ರಾಮಯ್ಯನವರು ಇದರ ವಿರುದ್ಧವಾದ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಎಲ್ಲವನ್ನು ತನ್ನ ಸುತ್ತಲು ನಡೆಯುವ ಘಟನೆ, ಮಾತುಕತೆ, ಜಗಳಗಳಿಂದ ಹಿಡಿದಿಡಿದಲು ಪ್ರಯತ್ನಿಸಿದ್ದಾರೆ. ಅದು ಶನಿದೇವರ ದೇವಸ್ಥಾನದ ಮೈಕ್ಸೆಟ್ನಲ್ಲಿ ಕೇಳುವ 'ಯುದ್ಧಕಾಂಡ'ದ ಹಾಡಿನಿಂದ ಹಿಡಿದು ಮಕ್ಕಳ ಕಣ್ಣಿಗೆ ಕಾಣದಾಗಿರುವ ಮಾವಿನ ಚಿಗುರಿನವರೆಗೂ; ಅದರ ಹಿಂದೆ ಇರಬಹುದಾದ ಅನೂಹ್ಯ ಕಾರಣಗಳನ್ನು ಬಗೆಯುತ್ತಾ ಹೋಗುತ್ತಾರೆ. ಹಿಡಿಮಣ್ಣನ್ನು ಸೂಕ್ಷ್ಮವಾಗಿ ಜಾಲಾಡಿ ನೋಡಿ, ಇಡೀ ನೆಲದ ಗುಣವನ್ನು ಅರಿಯುವ ವಿಜ್ಞಾನಿಯಂತೆ, ಆದರೆ ಅದು ವ್ಯಕ್ತವಾಗುವ ರೀತಿ ಘನ ಗಂಭೀರವಾಗಿಯಲ್ಲದೆ ತುಂಬಾ ಜಾಗಗಳಲ್ಲಿ ತಿಳಿಯಾಗಿಯೂ ಹಗೂರವಾಗಿಯೂ ವ್ಯಕ್ತವಾಗುತ್ತದೆ.
ಕೆ.ಪಿ. ಲಕ್ಷ್ಮಣ್
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.