Your cart is empty now.
ಸಾವಯವ ಬುದ್ಧಿಜೀವಿ ಮತ್ತು ಬಹುಜನ ನಾಯಕ
ಚೆಗುವಾರ, ಲ್ಯಾಟಿನ್ ಅಮೇರಿಕಾದ ಬಡವರ ಪರಿಸ್ಥಿತಿ ನೋಡಿ ತನ್ನ ವೈದ್ಯ ವೃತ್ತಿಯನ್ನು ಬಿಟ್ಟು ಕ್ರಾಂತಿಕಾರಿಯಾಗಿ ಪರಿವರ್ತನೆಯಾಗುತ್ತಾರೆ. ಅದನ್ನು ತನ್ನ ತಾಯಿಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸುತ್ತಾರೆ. ಅದೇ ರೀತಿಯಲ್ಲಿ ಕಾನ್ಸಿ ರಾಮ್ ರವರು ತಮ್ಮ ಕುಟುಂಬಕ್ಕೆ ಪತ್ರವೊಂದನ್ನು ಬರೆದರು. ಎಂದೂ ನಾನು ಕುಟುಂಬಕ್ಕೆ ಮರಳುವುದಿಲ್ಲ ಎಂದು ಹೇಳಿದರು. ಹಾಗೆಯೇ ನಡೆದುಕೊಂಡರು.
ಇದರಿಂದ ದಲಿತ-ಬಹುಜನರಿಗೆ ತಮ್ಮ ನಾಯಕ ಒಬ್ಬ ನಿಸ್ವಾರ್ಥಿ ಎಂಬುದು ಮನವರಿಕೆಯಾಯಿತು. ಏಕೆಂದರೆ ಇದು ಇತರ ಚಮಚಾಗಳ ಮಾದರಿಗೆ ವಿರುದ್ಧವಾದುದಾಗಿತ್ತು. ಚುನಾವಣೆಗಳನ್ನು ಗೆಲ್ಲಲು ಜಾತಿಯನ್ನು 'ಸಾಮಾಜಿಕ' ಮತ್ತು 'ಸಾಂಸ್ಕೃತಿಕ' ಬಂಡವಾಳವನ್ನಾಗಿ ಕಾನಿ ರಾಮ್ ಬಳಸಿದರು. 'ಸೋಶಿಯಲ್ ಇಂಜಿನಿಯರಿಂಗ್' ಪ್ರಯೋಗದ ಖಚಿತ ಬಹುಜನ ಮಾದರಿಯನ್ನು ಮುಂದಿಟ್ಟು ಬಹುಜನರನ್ನು ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರು. ಕಾಲ್ಕಿ ರಾಮ್ ರವರನ್ನು ಪ್ರಖರ ಪ್ರಾಯೋಗಿಕ ಅಂಬೇಡ್ಕರ್ ವಾದಿಯಾಗಿ ಮತ್ತು ರಾಜಕೀಯ ಮುತ್ಸದ್ದಿಯಾಗಿ ಮರುಪರಿಶೋಧಿಸಿಕೊಳ್ಳುವುದು ಈ ಕಾಲಮಾನಕ್ಕೆ ಬಹಳ ಸೂಕ್ತವಾದುದು. ಹಾಗೆ ಅವರನ್ನು ಯಾವುದೇ ರಾಜಕೀಯ ಪಕ್ಷದ ಆಸ್ತಿಯೆಂಬಂತೆ ನೋಡದೆ ವಿಶ್ವದ ಕ್ರಾಂತಿಕಾರಿ ಚಿಂತಕರು ಮತ್ತು ಬುದ್ಧಿ ಜೀವಿಗಳ ಸಾಲಿನಲ್ಲಿಟ್ಟು ಅರ್ಥಮಾಡಿಕೊಳ್ಳುವುದು ಅಗತ್ಯವೆನಿಸುತ್ತದೆ.
ಡಾ. ಸಿ.ಜಿ. ಲಕ್ಷ್ಮೀಪತಿ ಸಮಾಜಶಾಸ್ತ್ರಜ್ಞರು
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.