Your cart is empty now.
“ಕವಿ-ಕಾವ್ಯಪರವಾದ ಮುಕ್ತ ಸಹೃದಯತೆ, ಬಹುಶ್ರುತ ವಿದ್ವತ್ತು. ಅಪಾರವಾದ ವಿನಯ, ಸಮತೂಕದ ವಿಮರ್ಶನ ಪ್ರಜ್ಞೆ- ಇವು ಈ ವಿವೇಚನೆಯ ನೆಲೆಗಟ್ಟು. ಬೇಂದ್ರೆಯವರ ಕಾವ್ಯದ ಮುಖ್ಯ ಆಶಯಗಳನ್ನೂ ಮಾದರಿಗಳನ್ನೂ ಪ್ರತೀಕಗಳನ್ನೂ, ಒಟ್ಟಾರೆಯಾಗಿ ಬೇಂದ್ರೆ ಕಾವ್ಯದ ನಿಲುವುಗಳನ್ನೂ, ಇದುವರೆಗೆ ಬೇಂದ್ರೆ ಕಾವ್ಯದ ಕುರಿತು ನಡೆದಿರುವ ವಿಮರ್ಶೆಯ ಹಿನ್ನೆಲೆಯಲ್ಲಿ ಮತ್ತು ಸಮಕಾಲೀನ ಸಾಹಿತ್ಯ ಸಂದರ್ಭದಲ್ಲಿ ನೀವು ಚರ್ಚೆಗೆ ಗುರಿಪಡಿಸುವುದರ ಮೂಲಕ ಬೇಂದ್ರೆಯವರ ಸಾಹಿತ್ಯದ ಮರುಪರಿಶೀಲನೆಗೆ ಹಾಗೂ ಅರ್ಥವಂತಿಕೆಗೆ ಭದ್ರವಾದ ಬುನಾದಿಯನ್ನು ಹಾಕಿ ಕೊಟ್ಟಿದ್ದೀರಿ. ಇದಕ್ಕಾಗಿ ನಿಮಗೆ ಒಬ್ಬ ಓದುಗನಾಗಿ, ನನ್ನ ಹಾರ್ದಿಕ ಅಭಿನಂದನೆಗಳು!” – ಹೀಗೆಂದು ಡಾ. ಜಿ ಎಸ್ ಆಮೂರರಿಗೆ ಪತ್ರ ಬರೆದಿದ್ದು ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರು. ಬೇಂದ್ರೆಯವರ ನಾಕುತಂತಿಗೆ ಜ್ಞಾನಪೀಠ ಪ್ರಶಸ್ತಿ ಬಂದು ಅರ್ಧಶತಮಾನದ ಸಂಭ್ರಮ! ಜಿ ಎಸ್ ಆಮೂರರು ಇದ್ದಿದ್ದರೆ ಶತಮಾನೋತ್ಸವ! ಧಾರವಾಡದ ಸಾಹಿತ್ಯ ದಿಗ್ಗಜರ ನೆನಪಿಗೆ ನಾವೇನಾದರೂ ಮಾಡಲೇಬೇಕಲ್ಲ—ಎಂದು ಜಿ ಎಮ್ ಹೆಗಡೆಯವರು ಸಂಪಾದಿಸಿರುವ, ಡಾ ಜಿ ಎಸ್ ಆಮೂರ ಅವರ- “ಸಮಗ್ರ ಬೇಂದ್ರೆ ವಿಮರ್ಶೆಯ” ಒಟ್ಟು ಪುಟಗಳು ೧೧೫೦. ಕೆಲಿಕೊ ಬೈಂಡಿಂಗ್, ಜಾಕೀಟು. ಸುರಸುಂದರವಾದ ಮಹಾಸಂಪುಟ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.