Your cart is empty now.
ಪಶುವೈದ್ಯಕೀಯ ವೃತ್ತಿಯಲ್ಲಿದ್ದು ರೋಚಕ ಅನುಭವಗಳನ್ನು ಹಂಚಿಕೊಂಡ ಡಾ॥ ಎನ್. ಬಿ. ಶ್ರೀಧರ ಅವರ ಅನುಪಮ ಕೃತಿ. ಬರವಣಿಗೆಯ ಶೈಲಿ ತುಂಬ ಆಕರ್ಷಕವಾಗಿದ್ದು ವೃತ್ತಿ ಅನುಭವದೊಂದಿಗೆ ಹೇಳಿಕೊಂಡ ನವಿರು ಹಾಸ್ಯ ಪ್ರಸಂಗ ಖುಷಿ ನೀಡುತ್ತದೆ. ಜನರ ಕಾಯಿಲೆಯ ಚಿಕಿತ್ಸೆಗಿಂತ ಮೂಕ ಪ್ರಾಣಿಗಳ ಚಿಕಿತ್ಸೆಯ ಕಷ್ಟ ಏನೆಂದು ಈ ಕೃತಿಯಲ್ಲಿ ನಿವೇದಿಸಲಾಗಿದೆ. ಹಳ್ಳಿಗಳಲ್ಲಿನ ಜಾನುವಾರುಗಳ ಚಿಕಿತ್ಸೆಗೆ ವೈದ್ಯರು ಸ್ಥಳಕ್ಕೇ ಹೋಗಿ ಪರಿಶೀಲಿಸಿ, ತುರ್ತು ಚಿಕಿತ್ಸಾ ಸಂದರ್ಭ ಬಂದಾಗ ನಿಭಾಯಿಸಬೇಕಾದ ಕಷ್ಟ ಕಡಿಮೆಯೇನಲ್ಲ. ಸರಕಾರೀ ವೈದ್ಯರಾಗಿದ್ದು ಸರಕಾರದ ವ್ಯವಸ್ಥೆಯ ನಿರ್ಲಕ್ಷ್ಯದೊಂದಿಗೆ ಹೋರಾಡಬೇಕಾದ ಅನಿವಾರ್ಯತೆ ಈ ವೈದ್ಯರುಗಳದ್ದು. ಹೊತ್ತು ಗೊತ್ತಿಲ್ಲದಂತೆ ಕರೆಬಂದಾಗ ಸ್ಥಳಕ್ಕೆ ಹೋಗಿ ನೋಡಿ, ಕೈ ಮೀರಿದ ಪ್ರಸಂಗಗಳಿದ್ದರೂ ವೈದ್ಯರ ನಿರ್ಲಕ್ಷ್ಯವೆಂಬ "ಬಿರುದು" ಸಿಕ್ಕಾಗ ಆಗುವ ವೇದನೆ ಅಂತಿಂಥದ್ದಲ್ಲ. ಕೃತಿಯಲ್ಲಿ ಇವನ್ನೆಲ್ಲ "ಹಾಯ್ದು" ಬಂದ ವೈದ್ಯರೊಬ್ಬರ ಅನುಭವ ಓದಿ ನೋಡಿ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.