Your cart is empty now.
ಆಧ್ಯಾತ್ಮಿಕ ಚಿಂತಕಿಯಾಗಿ ಕಂಡು ಬಂದಿರುವ ಮಂಗಳಾ ಅವರು ‘ನಾನಾರು’ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಸತತ ಪ್ರಯತ್ನ ಮಾಡುವಲ್ಲಿ ತಮ್ಮ ಕೃತಿಯುದ್ದಕ್ಕೂ ಹಲವಾರು ಬಸವಾದಿ ಶಿವಶರಣರ ವಚನಗಳನ್ನು ಹೇರಳವಾಗಿ ಬಳಸಿಕೊಂಡಿದ್ದಾರೆ. ಅವರ ಈ ಕೃತಿಯನ್ನು ಓದುತ್ತಾ ಹೋದರೆ ಓದಿಸಿಕೊಳ್ಳುತ್ತಾ ಹೋಗುತ್ತದೆ.
- ಶಿವಾಜಿ ಗಣೇಶನ್
*****
ಇದೊಂದು ವಿಶಿಷ್ಟವಾದ ಕೃತಿ. ಇಲ್ಲಿನ ತಾತ್ವಿಕ ವಸ್ತುವು ಹಳೆಯದಾದರೂ ಚಿಂತನೆ ಮತ್ತು ಬರಹದ ಶೈಲಿಗಳು ಆಧುನಿಕವಾಗಿವೆ. ಅನೇಕ ಓದುಗರಿಗೆ ಹಲವು ಕಾರಣಗಳಿಗೆ ಈ ಕೃತಿಯು ಇಷ್ಟವಾಗುತ್ತದೆಂದು ನಂಬಿದ್ದೇನೆ.
- ಪ್ರೊ. ರಾಜೇಂದ್ರ ಚೆನ್ನಿ
*******
ಮಾನವನಿರ್ಮಿತ ಖೆಡ್ಡಾರಚನೆಗಳಲ್ಲಿ ಬಿದ್ದು ಒದ್ದಾಡುವವರಿಗೆ ವಚನಸಾಹಿತ್ಯದ ಓದು ದಕ್ಕದೇ ಹೋಗುವುದನ್ನು ಪ್ರಸ್ತಾಪಿಸುವ ಮಂಗಳಾ ಅವರು ಮುಕ್ತಮನಸ್ಸಿನಿಂದ ವಚನಗಳನ್ನು ಎದುರುಗೊಳ್ಳಬೇಕಾದ ಸವಾಲನ್ನು ನಮ್ಮ ಮುಂದಿಟ್ಟಿದ್ದಾರೆ. ತತ್ವ ಚಿಂತನೆಯೇ ಪ್ರಧಾನವಾದ ಈ ಕೃತಿ ತನ್ನ ಒಟ್ಟು ಪರಿಣಾಮದಲ್ಲಿ "ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ" ಎಂದು ಕರೆಕೊಟ್ಟಿದೆ. ಇಂಥ ಕೃತಿ ಮಹಿಳೆಯ ಮೂಲಕ ಹೊಮ್ಮಿದೆ ಎಂಬುದು ಮಂಗಳಾ ಅವರ ಆತ್ಮೀಯನಾದ ನನಗೆ ಖುಷಿಕೊಟ್ಟಿದೆ ...
- ಪ್ರೊ. ವಿ.ಚಂದ್ರಶೇಖರ ನಂಗಲಿ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.