Your cart is empty now.
ವನ್ಯಜೀವಿಗಳ, ಕಾಡಿನಾಳದ ನಿಸರ್ಗ ಶಿಕ್ಷಣವನ್ನು ಯಾವುದೇ ಸದ್ದು, ಗದ್ದಲ ಮಾಡದೇ ಅತಿ ನಿಷ್ಠೆಯಿಂದ ಸುತ್ತಲ ಸಮಾಜದಲ್ಲಿ ತಾರಿಮರದ ಹೂವಿನ ಕಂಪಿನಂತೆ ಹರಡುತ್ತಾ ನಿಡುಗಾಲದಿಂದ ದುಡಿದ 'ಗೋಪಾಲ ಮೇಷ್ಟರ' ಈ ಕಥಾನಕ ಓದಿ ಸವಿದೆ. ನಾಗರಹೊಳೆಯ ವನ್ಯಸಂರಕ್ಷಣೆಯ ಪ್ರಖ್ಯಾತ ಕೋಟ್ರಂಗಡ ಚಿಣ್ಣಪ್ಪನವರಿಗೆ ರಾಮನಿಗೆ ಹನುಮಂತನಂತೆ ఇంబు ಕೊಡುತ್ತಾ, ಮೂಲದಿಂದ ಬೇಟೆಯ ಗೀಳಿನ ಕೊಡಗಿನ ಗ್ರಾಮಸ್ಥರ ಮಕ್ಕಳಿಗೆ ಅವರಿಬ್ಬರೂ ವನ್ಯಸಂರಕ್ಷಣೆಯ ದಾರಿ ತೋರಿದ ತಿಳಿ ಹಾಸ್ಯದ ಪ್ರಸಂಗ ಇಲ್ಲಿದೆ. ಇದು ಹಳ್ಳಿಯ ವಿದ್ಯಾರ್ಥಿಗಳಿಗೆ ಕಾಡಿನ ವಿಹಾರ, ಪಕ್ಷಿ ವೀಕ್ಷಣೆ, ನಿಸರ್ಗ ಶಿಬಿರಗಳ ರುಚಿಹಿಡಿಸಿ, ವನ್ಯ ಸಂರಕ್ಷಣೆಯನ್ನು ಹೇಗೆ ಬೆಂಬಲಿಸಬಹುದು ಎಂದು ವಿವರಿಸಿ ಹೇಳುವ ಉಪಯುಕ್ತ ಕೈಪಿಡಿಯೂ ಹೌದು. ಶ್ರೇಷ್ಠ ವನ್ಯ ಛಾಯಾಚಿತ್ರಕಾರರು ತೆಗೆದ ಚಿತ್ರಗಳೂ, ಮಾಯಾ ರಾಮಸ್ವಾಮಿ, ಅನಿಲ್ ಜಗಳೂರು, ನರಸಿಂಹನ್ ಇವರ ಸುಂದರ ರೇಖಾಚಿತ್ರಗಳೂ ಈ ಕಿರು ಹೊತ್ತಿಗೆಗೆ ಮೆರುಗಿನ ಒಪ್ಪಹಾಕಿವೆ. ಈ ಯತ್ನಕ್ಕೆ ಕನ್ನಡ ಓದುಗರಿಂದ ಪ್ರೋತ್ಸಾಹದ ಹೊಳೆಯೇ ಹರಿದು ಬರಲೆಂದು ನನ್ನ ಹಾರೈಕೆ.
- ಕೆ. ಉಲ್ಲಾಸ ಕಾರಂತ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.