Free Shipping Above ₹500 | COD available

Dheemantara Saavu Sale -10%
Rs. 234.00Rs. 260.00
Vendor: BEETLE BOOK SHOP
Type: PRINTED BOOKS
Availability: 24 left in stock

ಧೀಮಂತರ ಸಾವು ಗುಣಸ್ವಭಾವ ಹಾಗೂ ಲೋಕದೃಷ್ಟಿಯ ನೆಲೆಯಿಂದ ಒಂದೇ ಚೌಕಟ್ಟಿನಲ್ಲಿ ಹಿಡಿದಿಡುವುದು ಕಷ್ಟವೆನಿಸುವಷ್ಟು ಇಲ್ಲಿರುವ ವ್ಯಕ್ತಿಗಳು ಬಹುರೂಪಿಗಳು. ಆದರೂ ಇವರಲ್ಲಿ ಸಾಕಷ್ಟು ಸಮಾನ ಅಂಶಗಳಿವೆ. ಹೆಚ್ಚಿನವರು ಮಾನವೀಯ ಮಿಡಿತವಿದ್ದವರು. ಸಾತ್ವಿಕ ಆಕ್ರೋಶ ತುಂಬಿಕೊಂಡಿದ್ದವರು. ಸಮಾನತೆಯ ಕನಸಿದ್ದವರು. ಆಸುಪಾಸಿನ ಸಮಾಜ ಬದಲಾಗಬೇಕೆಂದು ಚಡಪಡಿಸಿದವರು. ಬಿಕ್ಕಟ್ಟಿನ ಕಾಲದಲ್ಲಿ ತಮ್ಮೊಳಗಿದ್ದ ಕಸುವನ್ನು ಸುರಿದ ಕ್ರಿಯಾಶೀಲರು. ಧೀಮಂತರು. ಧೀಮಂತರ ಸಾವಿಗೆ ಯಾವತ್ತೂ ಪೂರ್ಣವಿರಾಮ ಇರುವುದಿಲ್ಲ. ಬಾಬಾಸಾಹೇಬರ ಚಿಂತನೆಗಳು ಅವರು ದೇಹಬಿಟ್ಟ ಅರ್ಧಶತಮಾನದ ಬಳಿಕ ಹೇಗೆ ದೇಶದ ಸಾಮಾಜಿಕ-ರಾಜಕೀಯ ಬದುಕನ್ನು ಬಿರುಗಾಳಿಯಂತೆ ಆವರಿಸಿಕೊಳ್ಳುತ್ತಿವೆ ಎಂಬುದಕ್ಕೆ ನಮ್ಮ ತಲೆಮಾರು ಸಾಕ್ಷಿಯಾಗಿದೆ. ಕೃತಿಯ ಲೇಖಕರಾದ ಡಾ॥ ರಹಮತ್ ತರೀಕೆರೆಯವರು ಕನ್ನಡ ವಿಶ್ವವಿದ್ಯಾಲಯದಲ್ಲಿ ಅನೇಕ ಮಹತ್ವಪೂರ್ಣ ಯೋಜನೆಗಳನ್ನು ಮೂಡಿಸಿದ್ದಾರೆ. ಸಂಶೋಧನೆ, ಸಂಪಾದನೆ, ವಿಮರ್ಶೆ ಹಾಗೂ ಧರ್ಮ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರಗಳಿಗೆ ಅವರು ನೀಡುತ್ತ ಬಂದಿರುವ ಕೊಡುಗೆ ವಿಶೇಷ ಮಹತ್ವದ್ದಾಗಿದೆ. ಪ್ರವಾಸ ಪ್ರಿಯರು ಕೂಡ. ಇವರಿಗೆ 2010ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಜೊತೆಗೆ ಇನ್ನೂ ಹಲವಾರು ಪ್ರಶಸ್ತಿಗಳು ಲಭಿಸಿವೆ. ಇವರ 'ಸಣ್ಣಸಂಗತಿ', 'ನಡೆದಷ್ಟೂ ನಾಡು', 'ಕದಳಿ ಹೊಕ್ಕು ಬಂದೆ', 'ಧರ್ಮ ಪರೀಕ್ಷೆ', 'ಅಂಡಮಾನ್ ಕನಸು' 'ಹಾಸು ಹೊಕ್ಕು' ಮತ್ತು 'ಜೆರುಸಲೆಂ' ನವಕರ್ನಾಟಕದಿಂದ ಪ್ರಕಟವಾಗಿವೆ

Guaranteed safe checkout

Dheemantara Saavu
- +

ಧೀಮಂತರ ಸಾವು ಗುಣಸ್ವಭಾವ ಹಾಗೂ ಲೋಕದೃಷ್ಟಿಯ ನೆಲೆಯಿಂದ ಒಂದೇ ಚೌಕಟ್ಟಿನಲ್ಲಿ ಹಿಡಿದಿಡುವುದು ಕಷ್ಟವೆನಿಸುವಷ್ಟು ಇಲ್ಲಿರುವ ವ್ಯಕ್ತಿಗಳು ಬಹುರೂಪಿಗಳು. ಆದರೂ ಇವರಲ್ಲಿ ಸಾಕಷ್ಟು ಸಮಾನ ಅಂಶಗಳಿವೆ. ಹೆಚ್ಚಿನವರು ಮಾನವೀಯ ಮಿಡಿತವಿದ್ದವರು. ಸಾತ್ವಿಕ ಆಕ್ರೋಶ ತುಂಬಿಕೊಂಡಿದ್ದವರು. ಸಮಾನತೆಯ ಕನಸಿದ್ದವರು. ಆಸುಪಾಸಿನ ಸಮಾಜ ಬದಲಾಗಬೇಕೆಂದು ಚಡಪಡಿಸಿದವರು. ಬಿಕ್ಕಟ್ಟಿನ ಕಾಲದಲ್ಲಿ ತಮ್ಮೊಳಗಿದ್ದ ಕಸುವನ್ನು ಸುರಿದ ಕ್ರಿಯಾಶೀಲರು. ಧೀಮಂತರು. ಧೀಮಂತರ ಸಾವಿಗೆ ಯಾವತ್ತೂ ಪೂರ್ಣವಿರಾಮ ಇರುವುದಿಲ್ಲ. ಬಾಬಾಸಾಹೇಬರ ಚಿಂತನೆಗಳು ಅವರು ದೇಹಬಿಟ್ಟ ಅರ್ಧಶತಮಾನದ ಬಳಿಕ ಹೇಗೆ ದೇಶದ ಸಾಮಾಜಿಕ-ರಾಜಕೀಯ ಬದುಕನ್ನು ಬಿರುಗಾಳಿಯಂತೆ ಆವರಿಸಿಕೊಳ್ಳುತ್ತಿವೆ ಎಂಬುದಕ್ಕೆ ನಮ್ಮ ತಲೆಮಾರು ಸಾಕ್ಷಿಯಾಗಿದೆ. ಕೃತಿಯ ಲೇಖಕರಾದ ಡಾ॥ ರಹಮತ್ ತರೀಕೆರೆಯವರು ಕನ್ನಡ ವಿಶ್ವವಿದ್ಯಾಲಯದಲ್ಲಿ ಅನೇಕ ಮಹತ್ವಪೂರ್ಣ ಯೋಜನೆಗಳನ್ನು ಮೂಡಿಸಿದ್ದಾರೆ. ಸಂಶೋಧನೆ, ಸಂಪಾದನೆ, ವಿಮರ್ಶೆ ಹಾಗೂ ಧರ್ಮ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರಗಳಿಗೆ ಅವರು ನೀಡುತ್ತ ಬಂದಿರುವ ಕೊಡುಗೆ ವಿಶೇಷ ಮಹತ್ವದ್ದಾಗಿದೆ. ಪ್ರವಾಸ ಪ್ರಿಯರು ಕೂಡ. ಇವರಿಗೆ 2010ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಜೊತೆಗೆ ಇನ್ನೂ ಹಲವಾರು ಪ್ರಶಸ್ತಿಗಳು ಲಭಿಸಿವೆ. ಇವರ 'ಸಣ್ಣಸಂಗತಿ', 'ನಡೆದಷ್ಟೂ ನಾಡು', 'ಕದಳಿ ಹೊಕ್ಕು ಬಂದೆ', 'ಧರ್ಮ ಪರೀಕ್ಷೆ', 'ಅಂಡಮಾನ್ ಕನಸು' 'ಹಾಸು ಹೊಕ್ಕು' ಮತ್ತು 'ಜೆರುಸಲೆಂ' ನವಕರ್ನಾಟಕದಿಂದ ಪ್ರಕಟವಾಗಿವೆ

• We deliver the books you order at beetlebookshop within 3-4 working days via india speed post .

Return of any defective / damage item should be done within 7 days from the date of the receipt of the shipment to our working office.