ಆರದ ಹೋರಾಟದ ಕಿಚ್ಚು | Arada Horatada Kicchu
ಲೇಖಕರು: ಪ್ರಬೀರ್ ಪುರಕಾಯಸ್ತ , Prabir Purkayastha
ಅನುವಾದಕರು: ಸದಾನಂದ ಆರ್ , Sadananda R
ಪ್ರಬೀರ್ ಪುರಕಾಯಸ್ತರ ಬಹು ಅರ್ಥಪೂರ್ಣವಾದ ಕೃತಿಯು ಅನುವಾದದಲ್ಲಿ ಕನ್ನಡಕ್ಕೆ ಬರುತ್ತಿರುವುದು ಅತ್ಯಂತ ಪ್ರಸ್ತುತವಾಗಿದೆ. ಕಾರಣವೆಂದರೆ ಒಂದು ವಿಶಿಷ್ಟ ಬಗೆಯ 'ಆತ್ಮಕಥನ ಅಥವಾ memoir ಆಗಿರುವ ಈ ಕೃತಿಯು ಎರಡು ತುರ್ತು ಪರಿಸ್ಥಿತಿಗಳ ಬಗ್ಗೆ ಇದೆ.
ಒಂದು - ಇಂದಿರಾ ಗಾಂಧಿಯವರು 1975-76ರಲ್ಲಿ ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿ. ಇನ್ನೊಂದು - ಈಗ ನಮ್ಮ ದೇಶದಲ್ಲಿ ಸಂವಿಧಾನಾತ್ಮಕವಾದ ಪ್ರಜೆಗಳ ಹಕ್ಕುಗಳನ್ನು ದಮನಮಾಡಿ ಅವರನ್ನು ಪ್ರಭುತ್ವದ ಹಿಂಸೆಗೆ ಒಡ್ಡುತ್ತಿರುವ ಅಘೋಷಿತ ತುರ್ತು ಪರಿಸ್ಥಿತಿ. ಇವೆರಡರ ನಡುವಿನ ದಶಕಗಳ ಕಥೆ ಇದಾಗಿದೆ: ಏಕಕಾಲಕ್ಕೆ ವೈಯಕ್ತಿಕವಾದ ಹಾಗೂ ಸಾಮುದಾಯಿಕವಾದ ಕಥನವಾಗಿದೆ. ಹೀಗಾಗಿ ಭಾರತದ ರಾಜಕೀಯ ಹಾಗೂ ನಾಗರೀಕ ಸಮುದಾಯಗಳಲ್ಲಿ ಆಗಿರುವ ಆತಂಕಕಾರಿ ಬೆಳವಣಿಗೆಗಳ ವಿಶ್ಲೇಷಣೆಯು ಈ ಕೃತಿಯಲ್ಲಿದೆ.
- ರಾಜೇಂದ್ರ ಚೆನ್ನಿ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.