Gandhimaneya Avalakki Sara - Beetle Book Shop

ಗಾಂಧಿಮನೆಯ ಅವಲಕ್ಕಿ ಸಾರ

Rs. 342.00
Sale price  Rs. 342.00 ಸಾಮಾನ್ಯ ಬೆಲೆ  Rs. 380.00
ಉತ್ಪನ್ನದ ಮಾಹಿತಿಗೆ ತೆರಳಿ
Gandhimaneya Avalakki Sara - Beetle Book Shop

ಗಾಂಧಿಮನೆಯ ಅವಲಕ್ಕಿ ಸಾರ

Rs. 342.00
Sale price  Rs. 342.00 ಸಾಮಾನ್ಯ ಬೆಲೆ  Rs. 380.00

ಮಾರಾಟಗಾರರು : BEETLE BOOK SHOP

ತನ್ನೂರಿನ ಬದುಕು ಮತ್ತದರ ಮೂರು ತಲೆಮಾರುಗಳಲ್ಲಾದ ಸ್ಥಿತ್ಯಂತರಗಳನ್ನು ಜಗದಗಲಕ್ಕೆ ಪರಿಚಯಿಸಬೇಕೆಂಬ ಉತ್ಕಟ ಬಯಕೆಯ ಫಲ - ಈ ಕಾದಂಬರಿ.

ಒಂದು ಸಾಂಪ್ರದಾಯಿಕ ಕಾದಂಬರಿಯ ಯಾವತ್ತೂ ವ್ಯಾಕರಣಗಳ ಗೊಡವೆಗೆ ಹೋಗದೆ, ತನ್ನ ಕರುಳು ಬಳ್ಳಿಯ ಸಂಬಂಧಗಳಿಗೆ ಭಾವನಾತ್ಮಕ ತೆರೆಪೊಂದನ್ನು ಒದಗಿಸುವ ಕೆಲಸವನ್ನು ಕಾದಂಬರಿಕಾರ ಎಂ. ಜಿ. ಹೆಗಡೆಯವರು ಇಲ್ಲಿ ಸಮರ್ಥವಾಗಿಯೇ ಮಾಡಿದ್ದಾರೆ. ಮೂಲತಃ ಕರಾವಳಿಯ ಉತ್ತರ ಭಾಗದವರಾದ (ಉತ್ತರ ಕನ್ನಡ ಜಿಲ್ಲೆ) ಅವರು ಈಗ ಮತ್ತು ಸುದೀರ್ಘಕಾಲದಿಂದ ಕರಾವಳಿಯ ದಕ್ಷಿಣದ (ದಕ್ಷಿಣ ಕನ್ನಡ ಜಿಲ್ಲೆ) ಭಾಗವೇ ಆಗಿರುವುದರಿಂದ, ತನ್ನ ಮೂಲದ ಕುರಿತು ಅವರಿಗೊಂದು ವಿಶಿಷ್ಟವಾದ ಒಳಗಿನದರ ಹೊರನೋಟ ಸಿಕ್ಕಿದೆ; ಅದೂ ಕೂಡ ಮಾಹಿತಿಯುತವಾದ ಹೊರನೋಟ. ಇದು ಈ ಕಾದಂಬರಿಯನ್ನು ವಿಶಿಷ್ಟಗೊಳಿಸುತ್ತದೆ.

ಮೂರು ತಲೆಮಾರುಗಳ ಸ್ಥಿತ್ಯಂತರವನ್ನು ವಸ್ತುವಾಗಿರಿಸಿಕೊಂಡ, ಹಲವು ಕಾದಂಬರಿಗಳು ಕನ್ನಡದಲ್ಲಿ ಬಂದಿವೆ. ಆದರೆ ಇಲ್ಲಿ, ಕಾದಂಬರಿಕಾರರು ತನ್ನ ಊರು-ಸಮಾಜವನ್ನು ಒಂದು ಮ್ಯಾಕ್ರೋ ನೆಲೆಗಟ್ಟಿನಿಂದ ನೋಡಲು ಪ್ರಯತ್ನಿಸಿರುವುದು, ನನ್ನ ಸೀಮಿತ ಓದಿನ ಮಿತಿಯಲ್ಲಿ ನನಗೆ ಗಮನಾರ್ಹ ಅನ್ನಿಸಿತು.

ಇಲ್ಲಿನ ಬಹುತೇಕ ಪಾತ್ರಗಳು ಸ್ಕೂಲವಾಗಿ ಕರ್ನಾಟಕದ ಕರಾವಳಿಯ ಯಾವುದೇ ಊರಿನ ಪಾತ್ರಗಳಾಗಿರಬಹುದು. ಭಾಷೆ-ಬದುಕು ಬೇರೆ ಇದ್ದರೂ, ಸಮಾಜ ಮತ್ತದರ ಸ್ಥಿತ್ಯಂತರಗಳು ಏಕರೂಪಿ ಮತ್ತು ಈ ಸ್ಥಿತ್ಯಂತರಗಳಿಗೆ ಅಸಂಖ್ಯ ಪರಕೀಯ ಕಾರಣಗಳು, ಪ್ರಭಾವಗಳು ಇರುತ್ತವೆ, ಮ್ಯಾಕ್ರೋ ಮಟ್ಟದಲ್ಲಿ ಅವೂ ಬಹುತೇಕ ಏಕರೂಪಿ ಆಗಿರುವುದು ಇದಕ್ಕೆ ಕಾರಣ ಇರಬಹುದು.

ಕಾದಂಬರಿಕಾರರು ತಾವು ಪ್ರತಿನಿಧಿಸುವ ಸಾಮಾಜಿಕ ವರ್ಗದ ಒಳಹೊರಗುಗಳನ್ನು ಇಲ್ಲಿ ಯಾವುದೇ ಭಿಡೆ ಇಲ್ಲದೆ, ಚರ್ಚಿಸುತ್ತಾರೆ. ಭೂಮಾಲಕ ವರ್ಗದ ಹೊರಗಿನ ಪಾತ್ರಗಳೆಲ್ಲ ಇಲ್ಲಿ ಬಹುತೇಕ ಪರಿಧಿಯಲ್ಲಿಯೇ ಕಥೆಗೆ ಪೂರಕವಾಗಿ ನಿಲ್ಲುತ್ತವೆ ಹೊರತು ಸ್ವತಃ ಕಥೆ ಆಗುವುದಿಲ್ಲ ಎಂಬುದು ಕೂಡ ಇಲ್ಲಿ ಗಮನಾರ್ಹ. ಆ ಮಟ್ಟಿಗೆ ಇಲ್ಲಿ ಪ್ರಾಮಾಣಿಕತೆ ಇದೆ. ಕಾದಂಬರಿಕಾರರು ಸ್ವತಃ ಸುದೀರ್ಘ ಕಾಲ ಸಾಮಾಜಿಕ, ರಾಜಕೀಯ ಹೋರಾಟಗಳಲ್ಲಿ ತೊಡಗಿಕೊಂಡಿದ್ದು, ತನ್ನ ಬದುಕಿನ ಉತ್ತರಾರ್ಧದ ಬಳಿಕ ಕಾದಂಬರಿಕಾರರಾಗುತ್ತಿರುವುದರಿಂದ, ಅವರಿಗೆ ಅಯಾಚಿತವಾಗಿ ಒದಗಿರುವ ಸಾಮಾಜಿಕ ಸ್ಪಷ್ಟತೆಗಳು, ಕೆಲವೊಮ್ಮೆ ಕಾದಂಬರಿಯ ಒಘಕ್ಕೆ ಪೂರಕವಾಗಿ ನಿಲ್ಲುವುದನ್ನು ಕಾದಂಬರಿಯ ಉದ್ದಕ್ಕೂ ಗಮನಿಸಬಹುದು. ಹಾಗಾಗಿ, ವಿಶಾಲವಾದ ಕ್ಯಾನ್ವಾಸ್ ಹೊರತಾಗಿಯೂ ಕಾದಂಬರಿಕಾರರಿಗೆ ತಾನು ಹೇಳಬೇಕಿರುವುದನ್ನು ಖಚಿತವಾಗಿ ಹೇಳಲು ಸಾಧ್ಯವಾಗಿದೆ.

- ರಾಜಾರಾಂ ತಲ್ಲೂರು

ಹೆಚ್ಚುವರಿ ಮಾಹಿತಿ

ವಿವರಣೆ

ತನ್ನೂರಿನ ಬದುಕು ಮತ್ತದರ ಮೂರು ತಲೆಮಾರುಗಳಲ್ಲಾದ ಸ್ಥಿತ್ಯಂತರಗಳನ್ನು ಜಗದಗಲಕ್ಕೆ ಪರಿಚಯಿಸಬೇಕೆಂಬ ಉತ್ಕಟ ಬಯಕೆಯ ಫಲ - ಈ ಕಾದಂಬರಿ.

ಒಂದು ಸಾಂಪ್ರದಾಯಿಕ ಕಾದಂಬರಿಯ ಯಾವತ್ತೂ ವ್ಯಾಕರಣಗಳ ಗೊಡವೆಗೆ ಹೋಗದೆ, ತನ್ನ ಕರುಳು ಬಳ್ಳಿಯ ಸಂಬಂಧಗಳಿಗೆ ಭಾವನಾತ್ಮಕ ತೆರೆಪೊಂದನ್ನು ಒದಗಿಸುವ ಕೆಲಸವನ್ನು ಕಾದಂಬರಿಕಾರ ಎಂ. ಜಿ. ಹೆಗಡೆಯವರು ಇಲ್ಲಿ ಸಮರ್ಥವಾಗಿಯೇ ಮಾಡಿದ್ದಾರೆ. ಮೂಲತಃ ಕರಾವಳಿಯ ಉತ್ತರ ಭಾಗದವರಾದ (ಉತ್ತರ ಕನ್ನಡ ಜಿಲ್ಲೆ) ಅವರು ಈಗ ಮತ್ತು ಸುದೀರ್ಘಕಾಲದಿಂದ ಕರಾವಳಿಯ ದಕ್ಷಿಣದ (ದಕ್ಷಿಣ ಕನ್ನಡ ಜಿಲ್ಲೆ) ಭಾಗವೇ ಆಗಿರುವುದರಿಂದ, ತನ್ನ ಮೂಲದ ಕುರಿತು ಅವರಿಗೊಂದು ವಿಶಿಷ್ಟವಾದ ಒಳಗಿನದರ ಹೊರನೋಟ ಸಿಕ್ಕಿದೆ; ಅದೂ ಕೂಡ ಮಾಹಿತಿಯುತವಾದ ಹೊರನೋಟ. ಇದು ಈ ಕಾದಂಬರಿಯನ್ನು ವಿಶಿಷ್ಟಗೊಳಿಸುತ್ತದೆ.

ಮೂರು ತಲೆಮಾರುಗಳ ಸ್ಥಿತ್ಯಂತರವನ್ನು ವಸ್ತುವಾಗಿರಿಸಿಕೊಂಡ, ಹಲವು ಕಾದಂಬರಿಗಳು ಕನ್ನಡದಲ್ಲಿ ಬಂದಿವೆ. ಆದರೆ ಇಲ್ಲಿ, ಕಾದಂಬರಿಕಾರರು ತನ್ನ ಊರು-ಸಮಾಜವನ್ನು ಒಂದು ಮ್ಯಾಕ್ರೋ ನೆಲೆಗಟ್ಟಿನಿಂದ ನೋಡಲು ಪ್ರಯತ್ನಿಸಿರುವುದು, ನನ್ನ ಸೀಮಿತ ಓದಿನ ಮಿತಿಯಲ್ಲಿ ನನಗೆ ಗಮನಾರ್ಹ ಅನ್ನಿಸಿತು.

ಇಲ್ಲಿನ ಬಹುತೇಕ ಪಾತ್ರಗಳು ಸ್ಕೂಲವಾಗಿ ಕರ್ನಾಟಕದ ಕರಾವಳಿಯ ಯಾವುದೇ ಊರಿನ ಪಾತ್ರಗಳಾಗಿರಬಹುದು. ಭಾಷೆ-ಬದುಕು ಬೇರೆ ಇದ್ದರೂ, ಸಮಾಜ ಮತ್ತದರ ಸ್ಥಿತ್ಯಂತರಗಳು ಏಕರೂಪಿ ಮತ್ತು ಈ ಸ್ಥಿತ್ಯಂತರಗಳಿಗೆ ಅಸಂಖ್ಯ ಪರಕೀಯ ಕಾರಣಗಳು, ಪ್ರಭಾವಗಳು ಇರುತ್ತವೆ, ಮ್ಯಾಕ್ರೋ ಮಟ್ಟದಲ್ಲಿ ಅವೂ ಬಹುತೇಕ ಏಕರೂಪಿ ಆಗಿರುವುದು ಇದಕ್ಕೆ ಕಾರಣ ಇರಬಹುದು.

ಕಾದಂಬರಿಕಾರರು ತಾವು ಪ್ರತಿನಿಧಿಸುವ ಸಾಮಾಜಿಕ ವರ್ಗದ ಒಳಹೊರಗುಗಳನ್ನು ಇಲ್ಲಿ ಯಾವುದೇ ಭಿಡೆ ಇಲ್ಲದೆ, ಚರ್ಚಿಸುತ್ತಾರೆ. ಭೂಮಾಲಕ ವರ್ಗದ ಹೊರಗಿನ ಪಾತ್ರಗಳೆಲ್ಲ ಇಲ್ಲಿ ಬಹುತೇಕ ಪರಿಧಿಯಲ್ಲಿಯೇ ಕಥೆಗೆ ಪೂರಕವಾಗಿ ನಿಲ್ಲುತ್ತವೆ ಹೊರತು ಸ್ವತಃ ಕಥೆ ಆಗುವುದಿಲ್ಲ ಎಂಬುದು ಕೂಡ ಇಲ್ಲಿ ಗಮನಾರ್ಹ. ಆ ಮಟ್ಟಿಗೆ ಇಲ್ಲಿ ಪ್ರಾಮಾಣಿಕತೆ ಇದೆ. ಕಾದಂಬರಿಕಾರರು ಸ್ವತಃ ಸುದೀರ್ಘ ಕಾಲ ಸಾಮಾಜಿಕ, ರಾಜಕೀಯ ಹೋರಾಟಗಳಲ್ಲಿ ತೊಡಗಿಕೊಂಡಿದ್ದು, ತನ್ನ ಬದುಕಿನ ಉತ್ತರಾರ್ಧದ ಬಳಿಕ ಕಾದಂಬರಿಕಾರರಾಗುತ್ತಿರುವುದರಿಂದ, ಅವರಿಗೆ ಅಯಾಚಿತವಾಗಿ ಒದಗಿರುವ ಸಾಮಾಜಿಕ ಸ್ಪಷ್ಟತೆಗಳು, ಕೆಲವೊಮ್ಮೆ ಕಾದಂಬರಿಯ ಒಘಕ್ಕೆ ಪೂರಕವಾಗಿ ನಿಲ್ಲುವುದನ್ನು ಕಾದಂಬರಿಯ ಉದ್ದಕ್ಕೂ ಗಮನಿಸಬಹುದು. ಹಾಗಾಗಿ, ವಿಶಾಲವಾದ ಕ್ಯಾನ್ವಾಸ್ ಹೊರತಾಗಿಯೂ ಕಾದಂಬರಿಕಾರರಿಗೆ ತಾನು ಹೇಳಬೇಕಿರುವುದನ್ನು ಖಚಿತವಾಗಿ ಹೇಳಲು ಸಾಧ್ಯವಾಗಿದೆ.

- ರಾಜಾರಾಂ ತಲ್ಲೂರು

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು