ಹುಟ್ಟೂರು ಮೈಸೂರು, ಸದ್ಯ ಬೆಂಗಳೂರಿನಲ್ಲಿ ವಾಸ, ಐಟಿ ಕ್ಷೇತ್ರದ ವಿವಿಧ ಹುದ್ದೆಗಳಲ್ಲಿ ಸುಮಾರು ಹದಿನೆಂಟು ವರ್ಷಗಳ ಅನುಭವ, ಬರವಣಿಗೆ ಆರಂಭಿಸಿದ್ದು ಅಂಕಣಗಳ ಮೂಲಕ, ವರ್ಷ 2014ರಲ್ಲಿ, ಕನ್ನಡಪ್ರಭಪತ್ರಿಕೆಯಲ್ಲಿ ಪ್ರತಿ ಮಂಗಳವಾರ 'ಕನ್ನಡಿ' ಎಂಬ ಅಂಕಣದಡಿ ಪ್ರಕಟವಾಗುತ್ತಿದ್ದ ಲೇಖನಗಳು ಈಗ ಪುಸ್ತಕದ ರೂಪದಲ್ಲಿ ಲಭ್ಯವಿವೆ. 2016ರಲ್ಲಿ ಚೊಚ್ಚಲ ಕಾದಂಬರಿ 'ಕ್ಷಮೆ' ಪ್ರಕಟ, ಅದು ಈಗ ಮರಾಠಿ ಭಾಷೆಯಲ್ಲಿ ಪ್ರಕಟವಾಗುತ್ತಿದೆ.
2018ರಲ್ಲಿ, ಕಶ್ಮೀರವನ್ನು ಕಥಾವಸ್ತುವನ್ನಾಗಿಸಿಕೊಂಡ 'ಕತೀರ' ಕಾದಂಬರಿ ಪ್ರಕಟ. ಕೃತಿಗೆ ಶ್ರೀ ಎಸ್.ಎಲ್. ಭೈರಪ್ಪನವರ ಮುನ್ನುಡಿಯ ರೂಪದ ಹಾರೈಕೆ. ಅದು ಹಿಂದಿ, ಆಂಗ್ಲ ಹಾಗೂ ಮರಾಠಿ ಭಾಷೆಗಳಿಗೆ ಅನುವಾದಗೊಂಡಿದೆ. 2020ರಲ್ಲಿ ಮೂರನೆಯ ಕೃತಿ 'ಅವಸಾನ' ಪ್ರಕಟವಾಗಿದ್ದು, ಮರಾಠಿ ಭಾಷೆಯಲ್ಲಿ ಲಭ್ಯವಿದೆ. ಕಳೆದ ನವೆಂಬರ್ 8 ರಂದು ಅಶೋಕನನ್ನು ಕುರಿತ ಐತಿಹಾಸಿಕ ಕಾದಂಬರಿ 'ಮಾಗಧ' ಪ್ರಕಟಗೊಂಡಿದ್ದು, ಅಪಾರ ಜನಮನ್ನಣೆ ಗಳಿಸಿ ಮರುಮುದ್ರಣಗಳನ್ನು ಕಾಣುತ್ತಿದೆ.