{"product_id":"savayava-krushi-by-dr-v-p-hegde","title":"ಡಾ. ವಿ.ಪಿ. ಹೆಗ್ಡೆಯವರ ಸಾವಯವ ಕೃಷಿ","description":"\u003cp\u003eಡಾ. ವಿ.ಪಿ. ಹೆಗ್ಡೆ, ಪರಿಸರ ಪ್ರೇಮಿ, ಮಣ್ಣಿನ ವೈದ್ಯ, ಎರೆಹುಳು ಪೋಷಕ, ಸಾವಯವ ಗೊಬ್ಬರ ತಯಾರಕ, ಸಸ್ಯ ಮಿತ್ರ, ಸಾವಯವ ಕೃಷಿಕ, ಕೃಷಿ ಮಾರ್ಗದರ್ಶಕ, ಕೆಂಚಾಂಬೆ ದೇವಿ ಭಕ್ತ.\u003c\/p\u003e\n\u003cp\u003e1939 ಡಿಸೆಂಬರ್ 27 ರಂದು ಜನಿಸಿದ, 86 ವಸಂತಗಳನ್ನು ಕಂಡಿರುವ, ಕೃಷಿ ಪಂಡಿತರಾದ ವಿ.ಪಿ. ಹೆಗ್ಡೆಯವರು ತಮ್ಮ ಜೀವನಾನುಭವದಿಂದ ಕಲಿತ ಪಾಠಗಳನ್ನು ವಿದ್ಯಾರ್ಥಿಗಳಿಗೆ, ಯುವ ಪೀಳಿಗೆಗೆ ಮತ್ತು ರೈತರಿಗೆ ನೀಡಲು ಸದಾ ಸಿದ್ಧರಿರುವ 'ಸಿಪಾಯಿ'.\u003c\/p\u003e\n\u003cp\u003eಯೋಜಿತ ಸಾವಯವ ಕೃಷಿಯು ಮಣ್ಣಿನ ಸಂರಕ್ಷಣೆ, ರೈತರ ಹಿತ ರಕ್ಷಣೆ, ಬೆಳೆಗಳ ಪೋಷಣೆ, ಸೂಕ್ಷ್ಮಜೀವಿಗಳ ರಕ್ಷಣೆ, ಪರಿಸರ ಕ್ಷೇಮ ಚಿಂತನೆ, ಜನರ ಆರೋಗ್ಯ ರಕ್ಷಣೆ ಮತ್ತು ಕೃಷಿಕರಿಗೆ ಆದಾಯ ತಂದುಕೊಡಬಲ್ಲ ಶಕ್ತಿಯನ್ನು ಹೊಂದಿದೆ.\u003c\/p\u003e\n\u003cp\u003e\"ಸ್ವಾರ್ಥವನ್ನು ಬಿಟ್ಟು ನಿಸ್ವಾರ್ಥವಾಗಿ ಭೂಮಿಗೆ, ಭೂಮಿ ತಾಯಿಗೆ ದ್ರೋಹ ಮಾಡದೆ, ಯಾವುದೇ ರಾಸಾಯನಿಕ ವಿಷವನ್ನು ಬಳಸದೆ ತಾನೂ ಬೆಳೆದು, ಸುತ್ತಲಿನ ಪರಿಸರವನ್ನು ಸ್ವಚ್ಛ ಮತ್ತು ಸುಂದರವಾಗಿಟ್ಟುಕೊಂಡು ಬದುಕುವ ಸಾವಯವ ಕೃಷಿಕನ ಬದುಕು ಬಂಗಾರವಾಗುತ್ತದೆ. ಅವನು ಭೂಮಿ ತಾಯಿಯ ಮೊದಲ ಮಗ\" ಎನ್ನುತ್ತಾರೆ ವಿ.ಪಿ. ಹೆಗ್ಡೆ.\u003c\/p\u003e\n\u003cp\u003eತೋಟಗಾರಿಕೆ ಬೆಳೆಗಳು, ಸಾಂಬಾರ ಬೆಳೆಗಳು, ಹೂವಿನ ಬೆಳೆಗಳು ಮತ್ತು ಹಣ್ಣಿನ ಬೆಳೆಗಳನ್ನು ಬೆಳೆಸುವುದರ ಕುರಿತು ಪ್ರಾಯೋಗಿಕವಾಗಿ ತಾವು ಕಂಡುಕೊಂಡ ಅನುಭವಗಳ ಸರಮಾಲೆಯೇ ಡಾ. ವಿ.ಪಿ. ಹೆಗ್ಡೆಯವರ \"ಸಾವಯವ ಕೃಷಿ\" ಕೃತಿಯಾಗಿದೆ.\u003c\/p\u003e\n\u003cp\u003eಭೂಮಿ ತಾಯಿಗೆ ವಿಷ ಉಣಿಸುತ್ತಿರುವ ರೈತ ಸಾವಯವ ಕೃಷಿಯ ಕಡೆಗೆ ಮುಖ ಮಾಡಿದರೆ ಈ ಕೃತಿ ಹೊರತಂದಿದ್ದು ಸಾರ್ಥಕವಾಗುತ್ತದೆ..\u003c\/p\u003e\n\u003cp\u003eಅಪ್ಪಾಜಿ ಗೌಡ ಟಿ. ಹೆಚ್. ಸಾಹಿತಿಗಳು -ಹಾಸನ\u003c\/p\u003e","brand":"BEETLE BOOK SHOP","offers":[{"title":"Default Title","offer_id":50376833827099,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/savayava-krushi-by-dr-vp-hegde-8609189.jpg?v=1767531727","url":"https:\/\/beetlebookshop.com\/kn\/products\/savayava-krushi-by-dr-v-p-hegde","provider":"Beetle Book Shop","version":"1.0","type":"link"}