{"product_id":"nishedha-chundoorina-nettara-kathe-novel","title":"ನಿಷೇಧ (ಚೂಂಡೂರಿನ ನೆತ್ತರ ಕಥೆ) ಕಾದಂಬರಿ","description":"\u003cp\u003eನಿಷೇಧ ಕಾದಂಬರಿಯಲ್ಲಿ ಬರುವ ಎಲ್ಲ ಪಾತ್ರಗಳ ನೋವುಗಳನ್ನು, ಅವಿಭಜಿತ ಕೋಲಾರ ಜಿಲ್ಲೆಯ ಗೌರಿಬಿದನೂರಿನ ಹೆಚ್.ನಾಗಸಂದ್ರದ ಜಮೀನುದಾರರ ಮನೆಯಲ್ಲಿ ಅತ್ಯಂತ ಹೀನಾಯವಾಗಿ ದುಡಿಸಿಕೊಳ್ಳುತ್ತಿದ್ದ ನೂರಾರು ಜೀತದಾಳುಗಳ ಬಿಡುಗಡೆ ಹಾಗೂ ‘ಜೀತ ಬೇಡ-ಶಾಲೆ ಬೇಕು’, ‘ಹೆಂಡ ಬೇಡ-ಭೂಮಿ ಬೇಕು’ ಎಂಬ ಘೋಷವಾಕ್ಯದಡಿಯಲ್ಲಿ ನಡೆದ ಭೂ ಹೋರಾಟದಲ್ಲಿ ಸ್ವತಃ ಅನುಭವಿಸಿದ್ದೇನೆ.\u003c\/p\u003e\n\u003cp\u003eಕಾದಂಬರಿಯಲ್ಲಿ ಅಕ್ಷರಸ್ಥ ‘ಯುವಕರ ಸಂಘ’ ಅತ್ಯಂತ ಜಾಗರೂಕತೆಯಿಂದ, ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿರುವುದು ಎದ್ದು ಕಾಣುತ್ತದೆ. ಹಟ್ಟಿಯಲ್ಲಿ ಅರಿವು ತುಂಬಲು ಅವರು ಪಟ್ಟಪಾಡು, ಅವರ ಗಟ್ಟಿತನ, ಬೆದರಿಕೆಗಳಿಗೆ ಜಗ್ಗದೆ ಎದುರಿಸಿದ ಸವಾಲುಗಳು, ಪೊಲೀಸ್ ಅಧಿಕಾರಿಗಳು, ವಕೀಲರು, ನ್ಯಾಯಾಲಯಗಳಿಗೆ ಸಂಪರ್ಕ ಸೇತುವೆಯಾದ ರೀತಿ, ಪ್ರತಿ ಹಂತದಲ್ಲೂ ಸಾಕ್ಷಿಗಳಲ್ಲಿ ಆತ್ಮಸ್ಥೈರ್ಯ, ಜಾಗೃತಿ ಮೂಡಿಸುತ್ತಾ ಅವರನ್ನು ಕಣ್‌ರೆಪ್ಪೆಯಂತೆ ಪ್ರಾಣದ ಹಂಗು ತೊರೆದು ಕಾಪಾಡಿದ ರೀತಿ ಓದುಗನನ್ನು ದಂಗುಬಡಿಸುತ್ತದೆ. ಇದರಲ್ಲಿ ಕಾರ್ಯಕರ್ತರಿಗೆ, ಸಂಘಟಕರಿಗೆ, ಚಳುವಳಿಕಾರರಿಗೆ ನೂರಾರು ಕಲಿಕೆಯ ಪಾಠಗಳಿವೆ.  \u003c\/p\u003e\n\u003cp\u003eನಲ್ಲೂರಿ ರುಕ್ಮಿಣಿಯವರು ಬರೆದ ತೆಲುಗಿನ ‘ನಿಷಿಧ’ ಕಾದಂಬರಿಯನ್ನು, ‘ನಿಷೇಧ’ ಹೆಸರಿನಲ್ಲಿ ಅತ್ಯಂತ ಸರಳವಾಗಿ, ಎಲ್ಲಾ ಕನ್ನಡ ಓದುಗರಿಗೂ ಸುಲಭವಾಗಿ ಅರ್ಥವಾಗುವಂತೆ ನಗರಗೆರೆ ರಮೇಶ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.\u003c\/p\u003e\n\u003cp\u003e- ಹ.ಮಾ.ರಾಮಚಂದ್ರ\u003c\/p\u003e\n\u003cp\u003e(ಮುನ್ನುಡಿಯಿಂದ)\u003c\/p\u003e\n\u003cp\u003e \u003c\/p\u003e","brand":"Beetle Book Shop","offers":[{"title":"Default Title","offer_id":47302147014939,"sku":"","price":347.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/nishedha-chundoorina-nettara-kathe-novel-2284012.jpg?v=1767534970","url":"https:\/\/beetlebookshop.com\/kn\/products\/nishedha-chundoorina-nettara-kathe-novel","provider":"Beetle Book Shop","version":"1.0","type":"link"}