Nelson Mandela Jeevana Charitre - Beetle Book Shop

ನೆಲ್ಸನ್ ಮಂಡೇಲಾ ಜೀವನ ಚರಿತ್ರೆ

Rs. 315.00
Sale price  Rs. 315.00 ಸಾಮಾನ್ಯ ಬೆಲೆ  Rs. 350.00
ಉತ್ಪನ್ನದ ಮಾಹಿತಿಗೆ ತೆರಳಿ
Nelson Mandela Jeevana Charitre - Beetle Book Shop

ನೆಲ್ಸನ್ ಮಂಡೇಲಾ ಜೀವನ ಚರಿತ್ರೆ

Rs. 315.00
Sale price  Rs. 315.00 ಸಾಮಾನ್ಯ ಬೆಲೆ  Rs. 350.00

ಮಾರಾಟಗಾರರು : BEETLE BOOK SHOP

ಒಂದು ಸಾರ್ಥಕ ಜೀವನದ ಅಮೋಘ ನಿರೂಪಣೆ ಇರುವ 'ನೆಲ್ಸನ್ ಮಂಡೇಲಾ ಜೀವನ ಚರಿತ್ರೆ'ಯು
ಜಗತ್ತಿನ ಇಂದಿನ ತುಡಿತಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ಒದಗಿಸುವಂತಹ ಮೇರುಕೃತಿ, ತನ್ನನ್ನು
ವೈಭವಿಸಿಕೊಳ್ಳುವ ಗೋಜಿಗೆ ಎಂದೂ ಹೋಗದೆ ಅನನ್ಯ ವಿಮೋಚನಾ ಸಮರವನ್ನು ಮುನ್ನಡೆಸುವ
ನಾಯಕನೊಬ್ಬನ ಮಹದ್ಗುಣಗಳಿಗೆ ಆದರ್ಶಪ್ರಾಯನಾದ ಮಂಡೇಲಾರ ಬಹುಮುಖೀ ಜೀವನದ
ಸಮಗ್ರ ಚಿತ್ರಣ ಇಲ್ಲಿ ದೊರೆಯುತ್ತದೆ. ಜಗತ್ಪಸಿದ್ಧ ರಿವೋನಿಯಾ ವಿಚಾರಣೆಯು ನಮ್ಮ ಜೀವಿತಕಾಲದ
ಮೌಲಿಕ ದಸ್ತಾವೇಜು ಮತ್ತು ದಕ್ಷಿಣ ಆಫ್ರಿಕಾದ ವಿಮೋಚನಾ ಹೋರಾಟವು ಎಲ್ಲ ಕಾಲಗಳಿಗೂ ಮತ್ತು
ಎಲ್ಲೆಡೆಗೂ ಅತ್ಯಂತ ಪ್ರಸ್ತುತವಾದ ಸಂಗತಿ. ಅಧಿಕೃತ ಪುರಾವೆಗಳ ಮೂಲಕ ಸಮರ್ಥವಾಗಿ ಡಾ. ಎಂ.
ವೆಂಕಟಸ್ವಾಮಿ ಅವರು ಮಂಡೇಲಾ ಮತ್ತವರ ಸಹ-ಹೋರಾಟಗಾರರ ಜೀವನಗಾಥೆಯನ್ನು ಆಪ್ತವಾಗಿ
ಓದುಗರಿಗೆ ಕಟ್ಟಿಕೊಟ್ಟಿದ್ದಾರೆ. ಅವರಿಗೆ ಅಭಿನಂದನೆ ಮತ್ತು ವಂದನೆಗಳು ಸಲ್ಲುತ್ತವೆ.
- ಡಾ. ಜಿ. ರಾಮಕೃಷ್ಣ
ಡಾ. ಎಂ. ವೆಂಕಟಸ್ವಾಮಿಯವರು ರಚಿಸಿರುವ 'ನೆಲ್ಸನ್ ಮಂಡೇಲಾ ಜೀವನ ಚರಿತ್ರೆ'ಯು ಲೇಖಕರ
ಅಪಾರ ಅಧ್ಯಯನದಿಂದ ಮೂಡಿಬಂದಿದೆ. ಮಂಡೇಲಾ ಅವರ ಬಾಲ್ಯದಿಂದ ಆರಂಭಿಸಿ ಭೌತಿಕ
ಅಂತ್ಯದವರೆಗಿನ ದಟ್ಟ ವಿವರಗಳ ಮಾಹಿತಿಯಿಂದ ತುಂಬಿಕೊಂಡಿರುವ ಈ ಕೃತಿಯ ನಿರೂಪಣೆಯಲ್ಲಿ
ಅಧಿಕೃತ ವರದಿಗಾರಿಕೆಯ ಲಕ್ಷಣ ಎದ್ದುಕಾಣುತ್ತದೆ. ನೆಲ್ಸನ್ ಮಂಡೇಲಾ ಅವರು ಜಗತ್ತು ಕಂಡ
ಬಹುದೊಡ್ಡ ಪ್ರಜಾಪ್ರಭುತ್ವವಾದಿ ಹೋರಾಟಗಾರರಲ್ಲಿ ಒಬ್ಬರಾಗಿರುವುದರಿಂದ, ಈ ಕೃತಿ ರಚನೆ ಮತ್ತು
ಪ್ರಕಟಣೆ, ಅವರಿಗೆ ಅರ್ಪಿಸಿದ ಪ್ರಜಾಸತ್ತಾತ್ಮಕ ಗೌರವವಾಗಿದೆ.
– ಡಾ. ಬರಗೂರು ರಾಮಚಂದ್ರಪ್ಪ.
ಅನ್ಯದೇಶಗಳನ್ನು ಅತಿಕ್ರಮಿಸಿಕೊಂಡ ಯೂರೋಪಿನ ವಸಾಹತುಶಾಹಿಗಳು ಅಲ್ಲಿನ ಸಂಪತ್ತನ್ನು ಲೂಟಿ
ಮಾಡುವುದಷ್ಟೇ ಅಲ್ಲದೆ ತಮ್ಮ ಆಡಳಿತದುದ್ದಕ್ಕೂ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಎಗ್ಗಿಲ್ಲದೆ
ಮಾಡುತ್ತಾ ಬಂದರು. ದಕ್ಷಿಣ ಆಫ್ರಿಕಾದ ಬುಡಕಟ್ಟು ಜನರಿಗೆ ಬಂಟುಸ್ತಾನ್‌ಗಳೆಂಬ ಕೊಳೆಗೇರಿಗಳನ್ನು
ನಿರ್ಮಿಸಿ ತಮ್ಮ ಸೇವೆಗಾಗಿಯೇ ಇರಿಸಿಕೊಂಡಿದ್ದರು. ಅಪಾರ್ಥೀಡ್‌ನಂಥ ಘೋರ ಅಪಮಾನಕ್ಕೆ
ಈಡುಮಾಡಿದರು. ಅಂಥ ಸನ್ನಿವೇಶದಲ್ಲಿ ಸ್ವಾತಂತ್ರ್ಯದ ಸೂರ್ಯೋದಯದಂತೆ ನೆಲ್ಸನ್ ಮಂಡೇಲಾ
ಉದಯಿಸಿದರು. ವಿಜ್ಞಾನ ಬರವಣಿಗೆಗೆ ಹೆಸರಾದ ಮಿತ್ರ ಎಂ. ವೆಂಕಟಸ್ವಾಮಿ, ಮಂಡೇಲಾ ಜೀವನ
ಕಥನವನ್ನು ಸಾದ್ಯಂತವಾಗಿ ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ.
– ಡಾ. ಮೂಡ್ನಾಕೂಡು ಚಿನ್ನಸ್ವಾಮಿ
1980ರ ದಶಕದಲ್ಲಿ ದಕ್ಷಿಣ ಆಫ್ರಿಕಾದ ಕರಿಯರ ಸ್ವಾತಂತ್ರ್ಯ ಹೋರಾಟ ತೀವ್ರವಾಗಿದ್ದ ಸಂದರ್ಭದಲ್ಲಿ
ಕನ್ನಡಿಗರಿಗೆ ಆ ಹೋರಾಟಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಸಿಗುತ್ತಿರಲಿಲ್ಲ. 1990ರಲ್ಲಿ ಕನ್ನಡದಲ್ಲಿ
ಮಂಡೇಲಾ ಜೀವನ ಚರಿತ್ರೆ ಪ್ರಕಟವಾದಾಗ, ಭಾರತೀಯ ಭಾಷೆಗಳಲ್ಲಿ ಬಂದ ಮೊದಲ ಪುಸ್ತಕವಾಯಿತು.
ಈಗ 33 ವರ್ಷಗಳ ನಂತರ ಮಂಡೇಲಾರ ವಿಸ್ತ್ರತ ಜೀವನ ಚರಿತ್ರೆ ಪ್ರಕಟವಾಗುತ್ತಿರುವುದು ಹೆಮ್ಮೆಯ
ವಿಚಾರ. ಡಾ. ಎಂ. ವೆಂಕಟಸ್ವಾಮಿಯವರ ಶ್ರಮ ಸಾರ್ಥಕವಾಗಿದೆ.
– ರಂಜಾನ್ ದರ್ಗಾ

ಹೆಚ್ಚುವರಿ ಮಾಹಿತಿ

ವಿವರಣೆ
ಒಂದು ಸಾರ್ಥಕ ಜೀವನದ ಅಮೋಘ ನಿರೂಪಣೆ ಇರುವ 'ನೆಲ್ಸನ್ ಮಂಡೇಲಾ ಜೀವನ ಚರಿತ್ರೆ'ಯು
ಜಗತ್ತಿನ ಇಂದಿನ ತುಡಿತಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ಒದಗಿಸುವಂತಹ ಮೇರುಕೃತಿ, ತನ್ನನ್ನು
ವೈಭವಿಸಿಕೊಳ್ಳುವ ಗೋಜಿಗೆ ಎಂದೂ ಹೋಗದೆ ಅನನ್ಯ ವಿಮೋಚನಾ ಸಮರವನ್ನು ಮುನ್ನಡೆಸುವ
ನಾಯಕನೊಬ್ಬನ ಮಹದ್ಗುಣಗಳಿಗೆ ಆದರ್ಶಪ್ರಾಯನಾದ ಮಂಡೇಲಾರ ಬಹುಮುಖೀ ಜೀವನದ
ಸಮಗ್ರ ಚಿತ್ರಣ ಇಲ್ಲಿ ದೊರೆಯುತ್ತದೆ. ಜಗತ್ಪಸಿದ್ಧ ರಿವೋನಿಯಾ ವಿಚಾರಣೆಯು ನಮ್ಮ ಜೀವಿತಕಾಲದ
ಮೌಲಿಕ ದಸ್ತಾವೇಜು ಮತ್ತು ದಕ್ಷಿಣ ಆಫ್ರಿಕಾದ ವಿಮೋಚನಾ ಹೋರಾಟವು ಎಲ್ಲ ಕಾಲಗಳಿಗೂ ಮತ್ತು
ಎಲ್ಲೆಡೆಗೂ ಅತ್ಯಂತ ಪ್ರಸ್ತುತವಾದ ಸಂಗತಿ. ಅಧಿಕೃತ ಪುರಾವೆಗಳ ಮೂಲಕ ಸಮರ್ಥವಾಗಿ ಡಾ. ಎಂ.
ವೆಂಕಟಸ್ವಾಮಿ ಅವರು ಮಂಡೇಲಾ ಮತ್ತವರ ಸಹ-ಹೋರಾಟಗಾರರ ಜೀವನಗಾಥೆಯನ್ನು ಆಪ್ತವಾಗಿ
ಓದುಗರಿಗೆ ಕಟ್ಟಿಕೊಟ್ಟಿದ್ದಾರೆ. ಅವರಿಗೆ ಅಭಿನಂದನೆ ಮತ್ತು ವಂದನೆಗಳು ಸಲ್ಲುತ್ತವೆ.
- ಡಾ. ಜಿ. ರಾಮಕೃಷ್ಣ
ಡಾ. ಎಂ. ವೆಂಕಟಸ್ವಾಮಿಯವರು ರಚಿಸಿರುವ 'ನೆಲ್ಸನ್ ಮಂಡೇಲಾ ಜೀವನ ಚರಿತ್ರೆ'ಯು ಲೇಖಕರ
ಅಪಾರ ಅಧ್ಯಯನದಿಂದ ಮೂಡಿಬಂದಿದೆ. ಮಂಡೇಲಾ ಅವರ ಬಾಲ್ಯದಿಂದ ಆರಂಭಿಸಿ ಭೌತಿಕ
ಅಂತ್ಯದವರೆಗಿನ ದಟ್ಟ ವಿವರಗಳ ಮಾಹಿತಿಯಿಂದ ತುಂಬಿಕೊಂಡಿರುವ ಈ ಕೃತಿಯ ನಿರೂಪಣೆಯಲ್ಲಿ
ಅಧಿಕೃತ ವರದಿಗಾರಿಕೆಯ ಲಕ್ಷಣ ಎದ್ದುಕಾಣುತ್ತದೆ. ನೆಲ್ಸನ್ ಮಂಡೇಲಾ ಅವರು ಜಗತ್ತು ಕಂಡ
ಬಹುದೊಡ್ಡ ಪ್ರಜಾಪ್ರಭುತ್ವವಾದಿ ಹೋರಾಟಗಾರರಲ್ಲಿ ಒಬ್ಬರಾಗಿರುವುದರಿಂದ, ಈ ಕೃತಿ ರಚನೆ ಮತ್ತು
ಪ್ರಕಟಣೆ, ಅವರಿಗೆ ಅರ್ಪಿಸಿದ ಪ್ರಜಾಸತ್ತಾತ್ಮಕ ಗೌರವವಾಗಿದೆ.
– ಡಾ. ಬರಗೂರು ರಾಮಚಂದ್ರಪ್ಪ.
ಅನ್ಯದೇಶಗಳನ್ನು ಅತಿಕ್ರಮಿಸಿಕೊಂಡ ಯೂರೋಪಿನ ವಸಾಹತುಶಾಹಿಗಳು ಅಲ್ಲಿನ ಸಂಪತ್ತನ್ನು ಲೂಟಿ
ಮಾಡುವುದಷ್ಟೇ ಅಲ್ಲದೆ ತಮ್ಮ ಆಡಳಿತದುದ್ದಕ್ಕೂ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಎಗ್ಗಿಲ್ಲದೆ
ಮಾಡುತ್ತಾ ಬಂದರು. ದಕ್ಷಿಣ ಆಫ್ರಿಕಾದ ಬುಡಕಟ್ಟು ಜನರಿಗೆ ಬಂಟುಸ್ತಾನ್‌ಗಳೆಂಬ ಕೊಳೆಗೇರಿಗಳನ್ನು
ನಿರ್ಮಿಸಿ ತಮ್ಮ ಸೇವೆಗಾಗಿಯೇ ಇರಿಸಿಕೊಂಡಿದ್ದರು. ಅಪಾರ್ಥೀಡ್‌ನಂಥ ಘೋರ ಅಪಮಾನಕ್ಕೆ
ಈಡುಮಾಡಿದರು. ಅಂಥ ಸನ್ನಿವೇಶದಲ್ಲಿ ಸ್ವಾತಂತ್ರ್ಯದ ಸೂರ್ಯೋದಯದಂತೆ ನೆಲ್ಸನ್ ಮಂಡೇಲಾ
ಉದಯಿಸಿದರು. ವಿಜ್ಞಾನ ಬರವಣಿಗೆಗೆ ಹೆಸರಾದ ಮಿತ್ರ ಎಂ. ವೆಂಕಟಸ್ವಾಮಿ, ಮಂಡೇಲಾ ಜೀವನ
ಕಥನವನ್ನು ಸಾದ್ಯಂತವಾಗಿ ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ.
– ಡಾ. ಮೂಡ್ನಾಕೂಡು ಚಿನ್ನಸ್ವಾಮಿ
1980ರ ದಶಕದಲ್ಲಿ ದಕ್ಷಿಣ ಆಫ್ರಿಕಾದ ಕರಿಯರ ಸ್ವಾತಂತ್ರ್ಯ ಹೋರಾಟ ತೀವ್ರವಾಗಿದ್ದ ಸಂದರ್ಭದಲ್ಲಿ
ಕನ್ನಡಿಗರಿಗೆ ಆ ಹೋರಾಟಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಸಿಗುತ್ತಿರಲಿಲ್ಲ. 1990ರಲ್ಲಿ ಕನ್ನಡದಲ್ಲಿ
ಮಂಡೇಲಾ ಜೀವನ ಚರಿತ್ರೆ ಪ್ರಕಟವಾದಾಗ, ಭಾರತೀಯ ಭಾಷೆಗಳಲ್ಲಿ ಬಂದ ಮೊದಲ ಪುಸ್ತಕವಾಯಿತು.
ಈಗ 33 ವರ್ಷಗಳ ನಂತರ ಮಂಡೇಲಾರ ವಿಸ್ತ್ರತ ಜೀವನ ಚರಿತ್ರೆ ಪ್ರಕಟವಾಗುತ್ತಿರುವುದು ಹೆಮ್ಮೆಯ
ವಿಚಾರ. ಡಾ. ಎಂ. ವೆಂಕಟಸ್ವಾಮಿಯವರ ಶ್ರಮ ಸಾರ್ಥಕವಾಗಿದೆ.
– ರಂಜಾನ್ ದರ್ಗಾ
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು