Your cart is empty now.
ಡಾರ್ವಿನ್ನ ವಿಕಾಸವಾದದನ್ವಯ ಮನುಷ್ಯನ ವಿಕಾಸದ ತಾಯಿ ಬೇರು ಇರುವುದೆ ಪ್ರಾಣಿಗಳ ವಿಕಾಸದಲ್ಲಿ, ಆದರೆ ಸನಾತನ ಮನಸ್ಸುಗಳು ಮನುಷ್ಯನನ್ನು ಸಮಕಾಲೀನ ಪ್ರಗತಿಪರ ಚಿಂತನೆಯಿಂದ ಬೇರ್ಪಡಿಸುತ್ತವೆ. ಮನುಷ್ಯನ ಕಷ್ಟ ಕೋಟಲೆಗಳಿಗೆ ಭಗವದ್ಗೀತೆಯ ಕರ್ಮ ಸಿದ್ಧಾಂತಕ್ಕೆ ತಳುಕು ಹಾಕುತ್ತವೆ. ದೆವ್ವ ದೇವರುಗಳನ್ನು ಸೃಷ್ಟಿಸುತ್ತವೆ. ಅವನ ನಂಬಿಕೆಗಳನ್ನು ವೈದ್ಯಕೀಯ ಸಂಶೋಧನೆಗಳಿಂದ ದೂರವಿರಿಸುತ್ತವೆ. ಶುದ್ಧ ಅವಿವೇಕಿಗಳಿಗೆ ಜೀವಶಾಸ್ತ್ರೀಯ ಚಿಂತನೆಗಳ ಅಗತ್ಯವಿಲ್ಲ.
'ಆನ್ ದಿ ರೆವಲ್ಯೂಷನ್ ಆಫ್ ದಿ ಹೆವೆನ್ಲಿ ಬಾಡೀಸ್' ಇದು ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ಅಪರೂಪದ ಕೃತಿ, ಇದರ ಕರ್ತೃ ಅಸಾಮಾನ್ಯ ಐಗೋಳ ವಿಜ್ಞಾನಿ ಕೂಪರ್ನಿಕಪ್, ಆತ ತನ್ನ ಸಂಶೋಧಿತ ಕೃತಿಯಲ್ಲಿ 'ಭೂಮಿ ಸೂರ್ಯನ ಸುತ್ತ ಪರಿಭ್ರಮಿಸುವುದು' (1545) ಎಂದು ಹರಾರುವಾಕ್ಕಾಗಿ ಪ್ರಸ್ತಾಪಿಸಿದ. ಆದರಿಂದ ಯುರೋಪಿನ್ ಚರ್ಚುಗಳು ಕೆಲ ಕಾಲ ಸ್ತಂಭೀಭೂತವಾದವು. ದೇಶದಾದ್ಯಂತ ಇದ್ದ ಧರ್ಮಗುರುಗಳು ದಿಗ್ಧಮಿತರಾದರು. ಸೂರ್ಯನೆ ತಾವಿರುವ ಭೂಮಿ ಸುತ್ತ ಪರಿಭ್ರಮಿಸುತ್ತಿರುವುದೆಂದು ಅಚಲ ನಂಬಿದ್ದೆ ಅವರ ದಿಗ್ಗಾಂತಿಗೆ ಕಾರಣವಾಗಿತ್ತು. ಕ್ಷೇತ್ರ ಸಮುದಾಯ ಆ ಖಗೋಳ ವಿಜ್ಞಾನಿಯನ್ನು ಒಕ್ಕೊರಲಿನಿಂದ ಖಂಡಿಸಿತು. ಧರ್ಮಕೇಂದ್ರಗಳು ಆತನ ವಿರುದ್ಧ ಹಲವು ವಿಧದ ಶಿಕ್ಷೆಗಳನ್ನು ಪ್ರಕಟಿಸಿದವು. ಅದಕ್ಕೆ ಸೂಪರ್ನಿಕಸ್ ಜಗ್ಗಲಿಲ್ಲ
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.