Your cart is empty now.
ಗುರುಪ್ರಸಾದ್ ಕಂಟಲಗೆರೆಯವರ ಕಥೆಗಳು ತಮ್ಮ ಸಂಯಮಪೂರ್ಣ ನಿರೂಪಣೆ, ಬಿಗುಪಿನ ಶೈಲಿ ಮತ್ತು ಕಹಿಯಿಲ್ಲದೆ ದುರಂತದ ತೀವ್ರತೆಯನ್ನು ಕಟ್ಟಿಕೊಡುವಲ್ಲಿ ತೋರುವ ಕಲಾತ್ಮಕತೆಯಿಂದ ಮತ್ತು ಸ್ಥಳೀಯತೆ-ಪ್ರಾದೇಶಿಕತೆಯನ್ನು ನಿಭಾಯಿಸುವ ವಿಧಾನಗಳಿಂದ ನನಗೆ ಪ್ರಿಯ, ದೇವನೂರು ಮಹಾದೇವರ ಬರಹಗಳ ವಿಸ್ತಯರಣೆಯಾಗಿ ಇಲ್ಲಿನ ಕಥೆಗಳು ನನಗೆ ಕಂಡಿವೆ.
ಕೇಶವ ಮಳಗಿ
----------
ಗುರುಪ್ರಸಾದ್ ಕಂಟಲಗೆರೆ ಕನ್ನಡದ ಕಥನ ಪರಂಪರೆಯನ್ನು ಸಮೃದ್ಧಗೊಳಿಸುತ್ತಿರುವ ಕಥೆಗಾರ. ಜನಭಾಷೆಯ-ನುಡಿ ವರಸೆಗಳನ್ನು ಮಾತ್ರವಲ್ಲ ಅದರೊಳಗಿನ ಜೀವದನಿ ಕಳೆಯದಂತೆ ಕತೆಗಟ್ಟುವ ಕಲೆ ಈತನಿಗೆ ಸಿದ್ದಿಸಿದೆ. ತೀವ್ರವಾಗಿ ಬದಲಾಗುತ್ತಿರುವ ಗ್ರಾಮೀಣ ಪರಿಸರ ಮತ್ತು ಬದುಕಿನ ಲಯಗಳನ್ನು ನಿಷ್ಟೂರ ಅನುರಕ್ತಿಯಿಂದ ಅವಲೋಕಿಸುವ ಕುಶಲತೆಯಿಂದ ಮಾತ್ರವಲ್ಲ ನಿರೂಪಣೆಗಳು ನಿಲುವುಗಳಿಂದ ನಿರಾಭರಣವಾಗಿ ಕಂಗೊಳಿಸುತ್ತವೆ. ಕಲ್ಪಕತೆಯ ಆವಾಹನೆಯಿಲ್ಲದೆ ಸರಳ ನಿರೂಪಣಾ ಕ್ರಮವು ಕತೆಗಳ ಆವರಣವನ್ನು ಮಾಯಕವಾಗಿಸುತ್ತದೆ. ಲೋಕ ವ್ಯಾಪಾರವನ್ನು ಕಂಟಲಗೆರೆ ನಿರೂಪಿಸುವಾಗ ಅದರ ಆಳದಲ್ಲಿ ಬಾಬಾಸಾಹೇಬರು ನೀಡಿರುವ ಅರಿವು ಅಂತರ್ಗಾಮಿಯಾಗಿ ಪ್ರವಹಿಸುವ ಪಸೆ ಓದುಗರ ಎದೆಯನ್ನು ತಟ್ಟುತ್ತದೆ. ದಮನಿತರ ಬದುಕಿನ ಬವಣೆಗಳನ್ನು ವಿವರಿಸುವಾಗಲೂ ಅಲ್ಲಿ ಉಸಿರಾಡುತ್ತಿರುವ ಜೀವನೋತ್ಸಾಹವನ್ನು ಗುರುತಿಸುವ ವಿನ್ಯಾಸವು ಅಚ್ಚರಿಯನ್ನುಬ್ಬಿಸುತ್ತದೆ. ಕಳೆದ ನೆನ್ನೆಗಿಂತ ಬರುವ ನಾಳೆ ಒಳಿತಾಗಬಹುದು ಎಂಬ ಭರವಸೆಯನ್ನುಂಟು ಮಾಡುವಂತೆ ಬರೆಯುತ್ತಾರೆ. ಮಾನವೀಯತೆಯಲ್ಲಿ ಆಳವಾದ ನಂಬಿಕೆ ಇಟ್ಟು ಬರೆಯುತ್ತಿರುವ ಗುರುಪ್ರಸಾದ್ರ ಬರಹದಲ್ಲಿ ಸಮಾಜದ ಕಣ್ಣ ಗಾಯವನ್ನು ಕಾಣಿಸುವ ಕತೆಗಾರರಿದ್ದಾರೆ. ಇವರ ಜೀವಪರ
ಕೆ. ವೈ. ನಾರಾಯಣಸ್ವಾಮಿ
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.